ಬಿಹಾರದಲ್ಲಿ ಅಮಾನವೀಯ ಘಟನೆ : ದಲಿತ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ,ಮಾರಣಾಂತಿಕ ಹಲ್ಲೆ!

ಪಾಟ್ನಾ: ಬಿಹಾರದಲ್ಲೊಂದು ಅಮಾನವೀಯ ಘಟನೆಯೊಂದು ನಡೆದಿದ್ದು, ಸಾಲಕ್ಕೆ ಬಡ್ಡಿ ನೀಡಿಲ್ಲ ಎಂದು ದಲಿತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ಬಿಹಾರದ ಖುಸ್ರುಪುರ್ ಜಿಲ್ಲೆಯ ಮೌಸಿಂಪುರ ಗ್ರಾಮದಲ್ಲಿ ಶನಿವಾರ ನಡೆದಿದೆ. 1,500 ರೂ.ಗಳ ಬಡ್ಡಿಯನ್ನು ಪಾವತಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ರಾತ್ರಿ ಮಹಿಳೆಯನ್ನು ಬಲವಂತವಾಗಿ ತಮ್ಮ ಮನೆಗೆ ಕರೆದೊಯ್ದರು. ಅಲ್ಲಿ, ದುಷ್ಕರ್ಮಿಗಳು 30 ವರ್ಷದ ಮಹಿಳೆಯನ್ನು ಬೆತ್ತಲೆಗೊಳಿಸಿ ಕೋಲುಗಳಿಂದ ಥಳಿಸಿದರು. ಇದರ ನಂತರ, ಮಹಿಳೆಯ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

ಸಂತ್ರಸ್ತೆ ಹೇಗೋ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರ ನಂತರ, ಕುಟುಂಬವು ಅವರನ್ನು ಚಿಕಿತ್ಸೆಗಾಗಿ ಖುಸ್ರುಪುರ್ ಪಿಎಚ್ಸಿಗೆ ದಾಖಲಿಸಿತು. ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿವೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಬಲೆ ಬೀಸಲಾಗಿದೆ.

ಮಹಿಳೆ ತನ್ನ ಕುಟುಂಬದೊಂದಿಗೆ ಮೌಸಿಂಪುರ ಗ್ರಾಮದ ಮಹಾದಲಿತ್ ಟೋಲೆಯಲ್ಲಿ ವಾಸಿಸುತ್ತಿದ್ದಾರೆ. ಆಕೆಯ ಪತಿ ಕೂಲಿ ಕೆಲಸ ಮಾಡುತ್ತಾನೆ. ಕಳೆದ ವರ್ಷ ಮಹಿಳೆ ಕೆಲವು ಕೆಲಸಗಳಿಗಾಗಿ ಗ್ರಾಮದ ಪ್ರಬಲ ವ್ಯಕ್ತಿ ಪ್ರಮೋದ್ ಸಿಂಗ್ ಅವರಿಂದ 1,500 ರೂ.ಗಳನ್ನು ಪಡೆದಿದ್ದರು. ಪ್ರಮೋದ್ ಗೂಂಡಾ ಬ್ಯಾಂಕ್ ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ. ಸಂತ್ರಸ್ತೆಯ ಕುಟುಂಬದ ಪ್ರಕಾರ, ಅವರು ಒಂದು ವರ್ಷದ ಹಿಂದೆ ಬಡ್ಡಿಯನ್ನು ಪಾವತಿಸಿದ ನಂತರ ಮೂಲ 1,500 ರೂ.ಗಳನ್ನು ಹಿಂದಿರುಗಿಸಿದ್ದರು. ಇದರ ಹೊರತಾಗಿಯೂ, ಪ್ರಮೋದ್ ಸಿಂಗ್ ಬಾಕಿ ಇರುವ ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು.

ಹಣ ನೀಡದಿದ್ದರೆ ಮಹಿಳೆಯನ್ನು ಗ್ರಾಮದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವುದಾಗಿ ಪ್ರಮೋದ್ ಸಿಂಗ್ ಹಲವಾರು ಬಾರಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಸಂತ್ರಸ್ತೆಯ ಮೇಲೂ ಹಲ್ಲೆ ನಡೆಸಲಾಗಿದೆ. ಮಹಿಳೆ ಫೋನ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರಿಗೆ ದೂರು ನೀಡಿದಾಗ, ಕೋಪಗೊಂಡ ಪ್ರಮೋದ್ ಸಿಂಗ್ ತನ್ನ ಮಗ ಮತ್ತು ಇತರ ನಾಲ್ವರು ಸಹಚರರೊಂದಿಗೆ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯ ಮನೆಗೆ ತಲುಪಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read