ಸೋನು ಸೂದ್‌ ರಿಂದ ಮತ್ತೊಂದು ಮಾನವೀಯ ಕಾರ್ಯ; ಪ್ರವಾಹ ಪೀಡಿತರ ರಕ್ಷಣೆಗೆ ಸಹಾಯವಾಣಿ ಆರಂಭ

ಪಂಜಾಬ್​ನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಟ ಹಾಗೂ ಸಮಾಜ ಸೇವಕ ಸೋನು ಸೂದ್​ ಸಂತ್ರಸ್ತರ ರಕ್ಷಣೆಗೆ ಸಹಾಯವಾಣಿ ಆರಂಭಿಸಿದ್ದಾರೆ. ಈ ಸಂಬಂಧ ಟ್ವಿಟರ್​ನಲ್ಲಿ ಸೋನು ಸೂದ್​ ಮಾಹಿತಿ ಶೇರ್​ ಮಾಡಿದ್ದಾರೆ.

ನನ್ನ ಪ್ರೀತಿಯ ಪಂಜಾಬ್​​ ಜನತೆ, ನಿಮಗಾದ ನೋವಿಗೆ ನನ್ನ ಹೃದಯ ಮಿಡಿಯುತ್ತಿದೆ. ನನ್ನನ್ನು ಬೆಳೆಸಿದ ಭೂಮಿಯನ್ನು ಪ್ರವಾಹವು ಹಾಳು ಮಾಡುತ್ತಿದೆ. ಇದನ್ನು ನೋಡಿ ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ. ಪಂಜಾಬ್​ ನನಗೆ ತುಂಬಾನೇ ಕೊಟ್ಟಿದೆ. ಈಗ ಅದನ್ನು ಹಿಂತಿರುಗಿಸುವ ಸಂದರ್ಭ ಬಂದಿದೆ. ನಾವು ಒಟ್ಟಾಗಿ ಈ ಚಂಡಮಾರುತ ಎದುರಿಸೋಣ ಎಂದು ಕರೆ ನೀಡಿದ್ದಾರೆ.

ಭಾರೀ ಮಳೆಯಿಂದಾಗಿ ಪಂಜಾಬ್​ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳು ಸಂಪೂರ್ಣ ಜಲಾವೃತಗೊಂಡಿವೆ. ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳು ಹಾನಿಗೆ ಒಳಗಾಗಿವೆ. ಪಂಜಾಬ್​ ಮತ್ತು ಹರಿಯಾಣದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿದೆಯಾದರೂ ಸಹ ಅಧಿಕಾರಿಗಳು ಇನ್ನೂ ಪರಿಹಾರ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ.

ಕೋವಿಡ್​ 19 ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೋನು ಸೂದ್​ರ ಪರೋಪಕಾರಿ ಕಾರ್ಯಗಳನ್ನು ಗುರುತಿಸಿ ಪಂಜಾಬ್​ ಸರ್ಕಾರವು ಅವರಿಗೆ ಸ್ಟೇಟ್​ ಐಕಾನ್​ ಗೌರವ ನೀಡಿದೆ. ಇದಕ್ಕೂ ಮೊದಲು, ಹರಿಯಾಣದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಹಾಯ ಮಾಡಲು ರಣದೀಪ್ ಹೂಡಾ ಮುಂದೆ ಬಂದಿದ್ದರು. ಅವರ ಗೆಳತಿ ಲಿನ್ ಲೈಶ್ರಾಮ್ ಕೂಡ ಪರಿಹಾರ ಕಾರ್ಯದಲ್ಲಿ ಸಾಥ್​ ನೀಡಿದ್ದಾರೆ.

https://twitter.com/SonuSood/status/1684094281940881409

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read