alex Certify ಸತ್ತಿದ್ದಾನೆಂದು ಭಾವಿಸಲಾಗಿದ್ದ ಪ್ರತ್ಯೇಕತಾವಾದಿ ಮತ್ತೆ ಪ್ರತ್ಯಕ್ಷ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ತಿದ್ದಾನೆಂದು ಭಾವಿಸಲಾಗಿದ್ದ ಪ್ರತ್ಯೇಕತಾವಾದಿ ಮತ್ತೆ ಪ್ರತ್ಯಕ್ಷ….!

ತಮ್ಮ ಸಾವಿನ ಬಗ್ಗೆ ಊಹಾಪೋಹಗಳು ಹೆಚ್ಚಾದ ಬೆನ್ನಲ್ಲೇ ಪ್ರತ್ಯೇಕತವಾವಾದಿ ಸಿಖ್ಸ್​ ಫಾರ್​ ಜಸ್ಟೀಸ್​​ ಸಂಸ್ಥಾಪಕ ಗುರುಪಂತ್ವತ್​​ ಸಿಂಗ್​ ಪನ್ನುನ್​​​ ತಾವು ಇನ್ನೂ ಬದುಕಿದ್ದು, ಚೆನ್ನಾಗಿಯೇ ಇದ್ದೇನೆ ಎಂದು ಹೇಳಿದ್ದಾನೆ.

ಕೆನಡಾ, ಬ್ರಿಟನ್​ ಹಾಗೂ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ರಾಜತಾಂತ್ರಿಕರನ್ನು ಗುರಿಯಾಗಿಸಿ ಹಾಕಿದ ಪೋಸ್ಟರ್​ಗಳ ಹಿಂದೆಯೂ ತಾನಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಖಲಿಸ್ತಾನಿ ಮೂಲಭೂತವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಆಪ್ತ ಸಹಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪರಾರಿಯಾದ ಪ್ರತ್ಯೇಕತಾವಾದಿ ಘೋಷಿಸಿದರು.

“ಹರ್ದೀಪ್ ನಿಜ್ಜಾರ್ ನನ್ನ ಕಿರಿಯ ಸಹೋದರ. ನಾವು 20 ವರ್ಷಗಳಿಗೂ ಹೆಚ್ಚು ಕಾಲದ ಒಡನಾಟವನ್ನು ಹೊಂದಿದ್ದೇವೆ. ನಾವು ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ” ಎಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಎದುರು ಚಿತ್ರೀಕರಿಸಿದ ವಿಡಿಯೋದಲ್ಲಿ ಪನ್ನುನ್ ಹೇಳಿದ್ದಾರೆ.

ಪ್ರತ್ಯೇಕತಾವಾದಿ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತೀಯ ರಾಜತಾಂತ್ರಿಕರ ಹೆಸರುಗಳು ಮತ್ತು ಛಾಯಾಚಿತ್ರಗಳೊಂದಿಗೆ “ಕೊಲ್ಲುವ ಪೋಸ್ಟರ್‌ಗಳನ್ನು” ಮಾಸ್ಟರ್ ಮೈಂಡ್ ಮಾಡಿದ್ದಾಗಿ ಇದೇ ವೇಳೆ ಒಪ್ಪಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...