ಟ್ರಿಪ್ ಗೆ ಹೋದ ಹೆಂಡ್ತಿ ಬರಲಿಲ್ಲ, ‘ಉಚಿತ ಪ್ರಯಾಣ’ ರದ್ದು ಮಾಡಿ ಎಂದು ಬಸ್ ಟೈರ್ ಗೆ ತಲೆಕೊಟ್ಟ ಭೂಪ

ಬೆಂಗಳೂರು : ‘ಟ್ರಿಪ್’ ಗೆ ಹೋದ ಹೆಂಡ್ತಿ ಬರಲಿಲ್ಲ, ಉಚಿತ ಪ್ರಯಾಣ ಯೋಜನೆ ರದ್ದು ಮಾಡಿ ಎಂದು ವ್ಯಕ್ತಿಯೋರ್ವ ಬಿಎಂಟಿಸಿ ಬಸ್ ಅಡಿ ಮಲಗಿ ಪ್ರತಿಭಟಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಾಜ್ಯದ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರು ಫುಲ್ ಖುಷ್ ಆಗಿದ್ದು, ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಸ್ಥಳಗಳಿಗೆ ಸುತ್ತಾಡುತ್ತಾ ಬಿಂದಾಸ್ ಆಗಿ ಪ್ರಯಾಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಶಕ್ತಿ ಯೋಜನೆಗೆ ರಾಜ್ಯದ ಜನರಿಂದ ನಾನಾ ಪ್ರತಿಕ್ರಿಯೆಗಳು ಬರುತ್ತಿದ್ದು, ಕೆಲವರು ಸರ್ಕಾರದ ವಿರೋಧ ಆಕ್ರೋಶ ಕೂಡ ಹೊರ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಮದ್ಯ ಸೇವಿಸಿದ ವ್ಯಕ್ತಿಯೋರ್ವ ಟ್ರಿಪ್ ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ ಎಂದು ಬಸ್ ಟೈರ್ ಗೆ ತಲೆಕೊಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರ ಸಮೀಪ ನಡೆದಿದೆ.

ಉಚಿತ ಪ್ರಯಾಣದ ಯೋಜನೆಯಿಂದ ಟ್ರಿಪ್ ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ ಎಂದು ಬಿಎಂಟಿಸಿ ಬಸ್ ಟೈರ್ ಅಡಿ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾರೆ. ಸಿದ್ದರಾಮಯ್ಯ ಸರಿಯಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ ರದ್ದುಗೊಳಿಸಿ ಎಂದು ಆಗ್ರಹಿಸಿದ್ದಾನೆ. ನಂತರ ಜನರು ಆತನನ್ನು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read