alex Certify ‘ಕನ್ಯೆ ಭಾಗ್ಯ’ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಗದಗದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕನ್ಯೆ ಭಾಗ್ಯ’ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಗದಗದ ಯುವಕ

ಗದಗ : ತಿಂಗಳಿಗೆ 50 ಸಾವಿರ ಆದಾಯವಿದ್ರೂ ಇದ್ರೂ ನನಗೆ ಹೆಣ್ಣು ಸಿಗುತ್ತಿಲ್ಲ ಎಂದು ಗದಗದ ಯುವಕನೊಬ್ಬ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ.

ಗದಗದ ಡಂಬಳ ಗ್ರಾಮದ ಯುವಕ ಗ್ರಾಮ ಪಂಚಾಯತಿ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ. ನಾನು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದೇನೆ, ನನಗೆ ತಿಂಗಳಿಗೆ 50,000 ಆದಾಯವಿದ್ದರೂ ನನಗೆ ಹೆಣ್ಣು ಸಿಗುತ್ತಿಲ್ಲ, ದಯವಿಟ್ಟು ನನಗೆ ‘ಕನ್ಯೆ ಭಾಗ್ಯ’ ಕಲ್ಪಿಸಿ ಎಂದು ಸರ್ಕಾರಕ್ಕೆ ಯುವಕ ಪತ್ರ ಬರೆದಿದ್ದಾನೆ.

ಈಗಾಗಲೇ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಹೆಣ್ಣು ಸಿಗುತ್ತಿಲ್ಲ ಎಂದು ಬ್ರಹ್ಮಚಾರಿ ಯುವಕರ ತಂಡವೊಂದು ಇತ್ತೀಚೆಗೆ ಮಾದಪ್ಪನ ಬೆಟ್ಟಕ್ಕೆ  ಪಾದಯಾತ್ರೆ ಹೋಗಿಬಂದಿತ್ತು. ಇದೀಗ ಗದಗದ ಯುವಕನೊಬ್ಬ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...