10 ವರ್ಷದ ಬಾಲಕನನ್ನು ಬಲಿ ಪಡೆದ ಮೊಸಳೆ : ರೊಚ್ಚಿಗೆದ್ದು ಮೊಸಳೆಯನ್ನೇ ಹಿಂಸಿಸಿ ಕೊಂದ ಜನ

ನವದೆಹಲಿ: 10 ವರ್ಷದ ಬಾಲಕನನ್ನು ಬಲಿ ಪಡೆದ ಮೊಸಳೆಯನ್ನು ಊರಿನ ಜನರು ಹಿಂಸಿಸಿ ಕೊಂದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ್ ದಿಯಾರಾ ದ್ವೀಪದ ಖಾಲ್ಸಾ ಘಾಟ್ ನಲ್ಲಿ ನಡೆದಿದೆ.

ಮೊಸಳೆ ಬಾಲಕನನ್ನು ಬಲಿ ಪಡೆದ ಹಿನ್ನೆಲೆ ರೊಚ್ಚಿಗೆದ್ದ ಜನರು ಮೊಸಳೆಯನ್ನು ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ.

ಬಿಡ್ದುಪುರ ಪೊಲೀಸ್ ವ್ಯಾಪ್ತಿಯ ಗೋಕುಲ್ಪುರದ ನಿವಾಸಿ ಧರ್ಮೇಂದ್ರ ದಾಸ್ ತನ್ನ ಕುಟುಂಬದೊಂದಿಗೆ ಧಾರ್ಮಿಕ ಸಮಾರಂಭಕ್ಕಾಗಿ ಗಂಗಾ ನದಿಯ ದಡಕ್ಕೆ ಬಂದಿದ್ದರು. ಧರ್ಮೇಂದ್ರ ಅವರ 10 ವರ್ಷದ ಮಗ ಅಂಕಿತ್ ಆಚರಣೆಗೆ ನೀರು ತರಲು ನದಿಯ ಬಳಿ ಬಂದಾಗ, ಇದ್ದಕ್ಕಿದ್ದಂತೆ ಮೊಸಳೆ ಅವನನ್ನು ಹಿಡಿದು ತಿಂದು ಹಾಕಿತ್ತು.
ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಮೊಸಳೆಯನ್ನು ಕೊಂದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read