ಬಾಗಲಕೋಟೆ : ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ (Free Bus Service) ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಬಸ್ ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.
ರಶ್ ಆದ ಬಸ್ ನಲ್ಲಿ ಕಳ್ಳರು ಕೈ ಚಳಕ ತೋರಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಖದೀಮನೋರ್ವ ಅಜ್ಜಿ ಬಳಿಯಿದ್ದ ಬ್ಯಾಗ್ ನಲ್ಲಿ 30 ಸಾವಿರ ಹಣ ( 30 Thousand) ಎಗರಿಸಿದ್ದಾನೆ.
ವೃದ್ದೆ ಚೆನ್ನಮ್ಮ ಬಾಣದ ಎಂಬುವವರು ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಿಂದ ಸಂಬಂಧಿಕರೊಬ್ಬರ ಮನೆಗೆ ಹಣ ಕೊಡಲು ಸರ್ಕಾರಿ ಬಸ್ ನಲ್ಲಿ ಹೊರಟಿದ್ದರು. ಬಸ್ ರಶ್ ಆದ ವೇಳೆ ಖದೀಮನೋರ್ವ ಅಜ್ಜಿ ಬ್ಯಾಗ್ ನಲ್ಲಿದ್ದ 30 ಸಾವಿರ ಹಣ ಎಗರಿಸಿದ್ದಾನೆ. ಬಸ್ ನಲ್ಲಿ ಸೀಟು ಸಿಗದೇ ಅಜ್ಜಿ ನಿಂತುಕೊಂಡಿದ್ದರು, ಈ ವೇಳೆ ಖದೀಮ ತನ್ನ ಕೈಚಖಕ ತೋರಿಸಿದ್ದಾನೆ.