ಬಿಜೆಪಿ ಮುಖಂಡನಿಗೆ ಗಾಳ ಹಾಕಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಹಾಸನ: ಹಾಸನ ಜಿಲ್ಲಾ ಬಿಜೆಪಿ ಮುಖಂಡನಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗಾಳ ಹಾಕಿದ್ದಾರೆ. ನಾರ್ವೆ ಸೋಮಶೇಖರ್ ಅವರು ಜೆಡಿಎಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿದೆ.

ಸಕಲೇಶಪುರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಾರ್ವೆ ಸೋಮಶೇಖರ್ ಅವರನ್ನು ರೇವಣ್ಣ ಜೆಡಿಎಸ್ ಗೆ ಸೆಳೆದಿದ್ದಾರೆ. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸೋಮಶೇಖರ್ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ.

ಕಳೆದ ಬಾರಿ ಕಡಿಮೆ ಅಂತರದಲ್ಲಿ ನಾರ್ವೆ ಸೋಮಶೇಖರ್ ಪರಾಭವಗೊಂಡಿದ್ದರು. ಸಕಲೇಶಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದ ನಾರ್ವೆ ಸೋಮಶೇಖರ್ ಹಾಸನದ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಮುಖಂಡರ ಜೊತೆಗೆ ಚರ್ಚೆ ನಡೆಸಿದ್ದಾರೆ. ಹಾಸನ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ದ್ಯಾವೇಗೌಡ, ಜೆಡಿಎಸ್ ಮುಖಂಡರ ಜೊತೆಗೆ ಒಂದೇ ಕಾರ್ ನಲ್ಲಿ ಸೋಮಶೇಖರ್ ತೆರಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read