alex Certify ಗೆಳೆಯನ ಮಾತು ಕೇಳಿ ಕೆನಡಾದಿಂದ ಬಂದ ಯುವತಿ ಹತ್ಯೆ; ವರ್ಷದ ಬಳಿಕ ಬೆಚ್ಚಿಬೀಳಿಸುವ ಸತ್ಯ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನ ಮಾತು ಕೇಳಿ ಕೆನಡಾದಿಂದ ಬಂದ ಯುವತಿ ಹತ್ಯೆ; ವರ್ಷದ ಬಳಿಕ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

ತನ್ನ ಪ್ರಿಯಕರನೊಂದಿಗೆ ಇರಲು ಕೆನಡಾದಿಂದ ಭಾರತಕ್ಕೆ ಮರಳಿದ ಯುವತಿಯನ್ನ ಆಕೆಯ ಪ್ರಿಯಕರನೇ ಹತ್ಯೆ ಮಾಡಿರೋ ಸಂಗತಿ ಬಯಲಾಗಿದೆ. ಹರಿಯಾಣದಲ್ಲಿ ಈ ಘಟನೆಯಾಗಿದ್ದು ಯುವತಿಯ ಶವದ ಕುರುಹು ಹೊಲದಲ್ಲಿ ಪತ್ತೆಯಾಗಿದೆ.

ಕಳೆದ ವರ್ಷದ ಜೂನ್‌ನಲ್ಲಿ 23 ವರ್ಷದ ನೀಲಂ ಎಂಬಾಕೆಯನ್ನು ಆಕೆಯ ಗೆಳೆಯ ಸುನಿಲ್ ಗುಂಡಿಟ್ಟು ಕೊಂದಿದ್ದು, ನಂತರ ಶವವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದ. ಆಕೆಯ ಅಸ್ಥಿಪಂಜರದ ಅವಶೇಷಗಳು ಮಂಗಳವಾರ ಭಿವಾನಿಯಲ್ಲಿ ಪೊಲೀಸರಿಗೆ ಪತ್ತೆಯಾಗಿವೆ.

ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆಯ ಕುಟುಂಬವು ದೂರು ನೀಡಿದ ನಂತರ ಪ್ರಕರಣ ಸತ್ಯಾಸತ್ಯತೆ ಬಯಲಾಗಿದೆ.

ನೀಲಂಳನ್ನು ಕೊಂದಿರುವುದಾಗಿ ಸುನೀಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅಪರಾಧವನ್ನು ಮರೆಮಾಚಲು ಆಕೆಯ ತಲೆಗೆ ಎರಡು ಬಾರಿ ಗುಂಡು ಹಾರಿಸಿ ನಂತರ ಶವವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಳೆದ ಜೂನ್‌ನಲ್ಲಿ ನೀಲಂ ಸಹೋದರಿ ರೋಶನಿ ಪೊಲೀಸರಿಗೆ ದೂರು ನೀಡಿದ್ದರು. ಆಕೆಯ ಸಹೋದರಿ ತನ್ನ ಇಂಟರ್ನ್ಯಾಷನಲ್ ಇಂಗ್ಲೀಷ್ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್ (ಐಇಎಲ್ಟಿಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಕೆಲಸಕ್ಕಾಗಿ ಕೆನಡಾಕ್ಕೆ ತೆರಳಿದ್ದಳು. ಕಳೆದ ವರ್ಷ ಜನವರಿಯಲ್ಲಿ ಸುನೀಲ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನೀಲಂ ಹಿಂದಿರುಗಿದ ನಂತರ ಆಕೆಯು ನಾಪತ್ತೆಯಾಗಿದ್ದಳು. ಸುನಿಲ್ ಕೂಡ ನಾಪತ್ತೆಯಾಗಿದ್ದ ಎಂದು ನೀಲಂ ಕುಟುಂಬ ಹೇಳಿದೆ. ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯಾಂಶ ಗೊತ್ತಾಗಿದೆ. ತಾನೂ ಕೂಡ ನೀಲಂ ಜೊತೆ ಕೆನಡಾದಲ್ಲಿ ವಾಸಿಸಲು ಇಚ್ಚಿಸಿದ್ದ ಸುನಿಲ್ ಅದು ಸಾಧ್ಯವಿಲ್ಲ ಎಂದು ಗೊತ್ತಾದಾಗ ಮದ್ಯದ ಅಮಲಿನಲ್ಲಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಕಸ್ಟಡಿಯಲ್ಲಿದ್ದ ಸುನೀಲ್‌ನ ವಿಚಾರಣೆಯ ಆಧಾರದ ಮೇಲೆ ಅಧಿಕಾರಿಗಳು ನೀಲಂ ಅಸ್ಥಿಪಂಜರದ ಅವಶೇಷಗಳನ್ನು ಅವನ ಜಮೀನಿನಲ್ಲಿ 10 ಅಡಿ ಆಳದ ಗುಂಡಿಯಿಂದ ಹೊರತೆಗೆದರು. ಮೃತದೇಹವನ್ನು ಸೋನಿಪತ್ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಸುನಿಲ್‌ ಮೇಲೆ ಕೊಲೆ ಮತ್ತು ಅಕ್ರಮ ಪಿಸ್ತೂಲ್ ಹೊಂದಿದ್ದ ಅರ್ಧ ಡಜನ್‌ಗೂ ಹೆಚ್ಚು ಪ್ರಕರಣಗಳು ಸೇರಿದಂತೆ ಅಪರಾಧದ ಇತಿಹಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಅವರಿಬ್ಬರೂ ಕುಟುಂಬಸ್ಥರಿಗೆ ಗೊತ್ತಿಲ್ಲದಂತೆ ಗುಟ್ಟಾಗಿ ಮದುವೆಯಾಗಿದ್ದರು ಎಂಬ ಮಾತು ಸಹ ಕೇಳಿಬಂದಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...