alex Certify ಬಿಜೆಪಿ ಸ್ಟಾರ್ ಪ್ರಚಾರಕ ಸುದೀಪ್ ಸಿನಿಮಾ, ಜಾಹೀರಾತು, ಟಿವಿ ಶೋ ನಿರ್ಬಂಧಿಸಲು ಚುನಾವಣಾ ಆಯೋಗಕ್ಕೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸ್ಟಾರ್ ಪ್ರಚಾರಕ ಸುದೀಪ್ ಸಿನಿಮಾ, ಜಾಹೀರಾತು, ಟಿವಿ ಶೋ ನಿರ್ಬಂಧಿಸಲು ಚುನಾವಣಾ ಆಯೋಗಕ್ಕೆ ದೂರು

ಶಿವಮೊಗ್ಗ: ನೀತಿ ಸಂಹಿತೆ ಅನುಸಾರ ನಟ ಕಿಚ್ವ ಸುದೀಪ್ ಅವರ ಚಲನಚಿತ್ರಗಳನ್ನು, ಟಿವಿ ಶೋಗಳನ್ನು ಮತ್ತು  ಅವರು ಇರುವ ಜಾಹೀರಾತುಗಳನ್ನು ಚುನಾವಣೆ ಮುಗಿಯುವವರೆಗೂ ತಡೆ ಹಿಡಿಯುವಂತೆ ಕೋರಿ ಶಿವಮೊಗ್ಗದ ವಕೀಲ ಕೆ.ಪಿ. ಶ್ರೀಪಾಲ್ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಕನ್ನಡದ ಚಲನ ಚಿತ್ರನಟ ಕಿಚ್ಚ  ಸುದೀಪ್  ಅವರು ಭಾರತೀಯ ಜನತಾ  ಪಕ್ಷದ  ಸ್ಟಾರ್ ಪ್ರಚಾರಕರಾಗಿರುವುದರಿಂದ  ಚುನಾವಣೆ ಮುಗಿಯುವ ವರೆಗೂ ಅವರ ನಟನೆಯ  ಯಾವುದೇ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಮತ್ತು ಟಿವಿಗಳಲ್ಲಿ  ಪ್ರದರ್ಶನವಾಗದಂತೆ ಅವರು ನಡೆಸಿಕೊಡುವ ಟಿವಿಶೋಗಳು  ಪ್ರಸಾರವಾಗದಂತೆ  ಮತ್ತು  ಅವರು ನಟಿಸಿರುವ  ಜಾಹೀರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ  ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಅವರು ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದನ್ನು ಅವರೇ ಘೋಷಣೆ ಮಾಡಿದ್ದರಿಂದ  ಅವರ ನಟನೆಯ ಚಲನಚಿತ್ರಗಳು, ಟಿವಿ ಶೋಗಳು ಹಾಗೂ ಜಾಹಿರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ.  ಆದ್ದರಿಂದ ತಕ್ಷಣದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂದಿಸಿದಂತೆ ತುರ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tu nájdete najlepšie tipy a triky na zlepšenie vášho života, skvelé recepty na varenie a užitočné články o záhradkárstve. Buďte pripravení na zmenu a objavte nové spôsoby, ako efektívne využívať svoj čas a zdroje. Sledujte nás a zdokonalte svoje každodenné zručnosti! Čínsky kapustový šalát s Vajcová Chutné ovocné Tabbouleh šalát s bulgur od A až Penne