ಹಚ್ಚಿಟ್ಟಿದ್ದ ಸೊಳ್ಳೆ ಬತ್ತಿ ಬೆಡ್ ಮೇಲೆ ಬಿದ್ದು ಹೊತ್ತಿಕೊಂಡ ಬೆಂಕಿ; ಒಂದೇ ಕುಟುಂಬದ 6 ಮಂದಿಯ ದುರಂತ ಸಾವು

ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿಯಿಂದ ದೆಹಲಿಯ ಶಾಸ್ತ್ರಿ ಪಾರ್ಕ್ ನಿವಾಸದಲ್ಲಿ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಪೊಲೀಸರ ಪ್ರಕಾರ ಹಚ್ಚಿಟ್ಟಿದ್ದ ಸೊಳ್ಳೆ ಕಾಯಿಲ್ ರಾತ್ರಿಯ ಸಮಯದಲ್ಲಿ ಹಾಸಿಗೆಯ ಮೇಲೆ ಬಿದ್ದಿದೆ. ವಿಷಕಾರಿ ಹೊಗೆಯ ಪರಿಣಾಮವಾಗಿ ಕುಟುಂಬದ ಹಲವಾರು ಸದಸ್ಯರು ಪ್ರಜ್ಞೆಯನ್ನು ಕಳೆದುಕೊಂಡರು. ತರುವಾಯ ಇದು ಅವರ ಸಾವಿಗೆ ಕಾರಣವಾಯಿತು.

ಮೃತಪಟ್ಟ ಆರು ಜನರಲ್ಲಿ ನಾಲ್ವರು ವಯಸ್ಕ ಪುರುಷರು, ಒಬ್ಬರು ವಯಸ್ಕ ಮಹಿಳೆ ಮತ್ತು ಒಂದು ಮಗು ಸೇರಿದೆ.

ಇನ್ನಿಬ್ಬರು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಓರ್ವನನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read