KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಖಾತೆಗೆ ಪ್ರೋತ್ಸಾಹಧನ ಜಮಾ ಶೀಘ್ರ

Published February 20, 2023 at 7:19 am
Share
SHARE

ಬೆಳಗಾವಿ: ಶೀಘ್ರವೇ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಸರ್ಕಾರ ಮುಂದಾಗಿದೆ. ಎಸ್.ಎಸ್.ಎಲ್.ಸಿ. ಮತ್ತು ಮೆಟ್ರಿಕ್ ನಂತರದ ಪ್ರತಿಭಾನ್ವಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಹಿಂದಿನ ವರ್ಷಗಳಿಗಿಂತ ಕೊರೋನೋತ್ತರ ವರ್ಷ 2021 -22, 2022 – 23ರಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿದ್ದರಿಂದ ಹೆಚ್ಚುವರಿ ಅನುದಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯಾರ್ಥಿಗಳ ಖಾತೆಗೆ ಶೀಘ್ರವೇ ಪ್ರೋತ್ಸಾಹ ಧನ ಜಮಾ ಮಾಡಲಾಗುವುದು. ಅನುದಾನ ಕೊರತೆಯಾದಲ್ಲಿ ರಾಜ್ಯ ವಲಯದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಥಮ ಪ್ರಯತ್ನದಲ್ಲಿಯೇ ಶೇಕಡ 60 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಪ್ರೋತ್ಸಾಹಧನಕ್ಕಾಗಿ 381.87 ಕೋಟಿ ರೂಪಾಯಿ ಅನುದಾನದಲ್ಲಿ 166 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 118 ಕೋಟಿ ರೂ.ಗಳನ್ನು 1.02 ಲಕ್ಷ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪ್ರೋತ್ಸಾಹಧನಕ್ಕೆ ವೆಚ್ಚ ಮಾಡಲಾಗಿದ್ದು, ಉಳಿದ 48 ಕೋಟಿ ರೂ.ಗಳನ್ನು ಮೆಟ್ರಿಕ್ ನಂತರದ ಪ್ರೋತ್ಸಾಹಧನಕ್ಕಾಗಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.

ವಿದ್ಯಾರ್ಥಿಗಳ ಅರ್ಜಿಗಳ ಜೇಷ್ಠತೆ ಮಾನದಂಡ ಅನುಸರಿಸಿ ಪ್ರೋತ್ಸಾಹಧನ ಪಾವತಿಸಲಾಗಿದೆ. ಎಲ್ಲಾ ಅರ್ಜಿಗಳಿಗೂ ಪ್ರೋತ್ಸಾಹಧನ ಪಾವತಿಸಲು 49 ಕೋಟಿ ರೂ. ಬೇಡಿಕೆ ಸಲ್ಲಿಕೆಯಾಗಿದ್ದು, ಶೀಘ್ರವೇ ವಿದ್ಯಾರ್ಥಿಗಳ ಖಾತೆಗೆ ಪ್ರೋತ್ಸಾಹ ಧನ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.

You Might Also Like

RAIN ALERT: ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ: ಅಲರ್ಟ್ ಘೋಷಣೆ

ದಕ್ಷಿಣ ಕನ್ನಡ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 116 ಪೊಲೀಸರ ವರ್ಗಾವಣೆ

ಹೊಲಿಗೆ ಯಂತ್ರ ತರಬೇತಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ

ರೈತರಿಗೆ ಮುಖ್ಯ ಮಾಹಿತಿ : ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭ

BIG NEWS : ರೈತರು ‘ಡಿಎಪಿ’ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸಲಹೆ

TAGGED:Studentsವಿದ್ಯಾರ್ಥಿಗಳುaccountಖಾತೆಪ್ರೋತ್ಸಾಹಧನಜಮಾIncentivesCredited
Share This Article
Facebook Copy Link Print

Latest News

RAIN ALERT: ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ: ಅಲರ್ಟ್ ಘೋಷಣೆ
ದಕ್ಷಿಣ ಕನ್ನಡ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 116 ಪೊಲೀಸರ ವರ್ಗಾವಣೆ
ಹೊಲಿಗೆ ಯಂತ್ರ ತರಬೇತಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ
ರೈತರಿಗೆ ಮುಖ್ಯ ಮಾಹಿತಿ : ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!

Automotive

ಬಾಳೆಹಣ್ಣಿನ ಸಿಪ್ಪೆಯ ಕಾರು……! ಸಾರ್ವಜನಿಕರ ಗಮನ ಸೆಳೆದ ವಿಶಿಷ್ಟ ಹೋಂಡಾ ಸಿವಿಕ್ | Watch Video
ಹೆಲ್ಮೆಟ್ ಇಲ್ಲದೆ ಕೈ ಬಿಟ್ಟು ಸ್ಕೂಟರ್ ಸವಾರಿ: ಯುವತಿ ಅಪಾಯಕಾರಿ ಸಾಹಸ ವೈರಲ್ | Watch Video
ಬಸ್ ಮುಂದೆ ಬುಲೆಟ್ ಸವಾರನ ಸ್ಟಂಟ್ ; ಬೈಕ್ ಜಪ್ತಿ‌ ಮಾಡಿ ಗುಜರಿಗೆ ರವಾನಿಸಲು ಮುಂದಾದ ಪೊಲೀಸ್‌ | Watch

Entertainment

‘ಮಿಸ್ ಯೂ ಮಗನೇ’: ಹಾಸ್ಯನಟ ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಪ್ರೇಮ್ ಕಂಬನಿ
ರಶ್ಮಿಕಾ ಮಂದಣ್ಣ: ಮಹಿಳಾ ಪ್ರಗತಿಗೆ ಹಿನ್ನಡೆಯೇ?
ತಮನ್ನಾ ಭಾಟಿಯಾ ಆಯೋಜಿಸಿದ್ದ ʼಮಾತಾ ಕಿ ಚೌಕಿʼ ಯಲ್ಲಿ ರಾಶಾ ತಡಾನಿ ಭಾಗಿ; ವಿಡಿಯೋ ವೈರಲ್ | Watch

Sports

BIG NEWS: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ಸೇರಿದಂತೆ ಹಲವರ ವಿರುದ್ಧ ದೂರು: ಮ್ಯಾಚ್ ಫಿಕ್ಸಿಂಗ್ ಬಾಂಬ್ ಸಿಡಿಸಿದ ಟಿ.ಜೆ. ಅಬ್ರಾಹಂ
ಭಾರತೀಯ ಆಟಗಾರರು ಮತ್ತು ಫೀಲ್ಡಿಂಗ್ ಕೋಚ್ ನಡುವೆ ʼತೀವ್ರ ಚರ್ಚೆʼ ; ಮರುಕ್ಷಣವೇ ಸೌಹಾರ್ದದ ವಾತಾವರಣ | Watch
BREAKING NEWS: ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯಲಿದೆ ಉದ್ಘಾಟನಾ ಸಮಾರಂಭ

Special

ಬಾಟಲ್ ʼಕ್ಯಾಪ್ʼ ಹೇಳುತ್ತೆ ಕುಡಿಯುವ ನೀರಿನ ಅಸಲಿಯತ್ತು….! ಇಲ್ಲಿದೆ ನಿಮಗೆ ತಿಳಿಯಲೇಬೇಕಾದ ʼರಹಸ್ಯʼ
ಹಣ್ಣು ತರಕಾರಿ ತಿನ್ನದ ಮಕ್ಕಳಿಗೆ ಮಾಡಿ ಈ ಉಪಾಯ
ಕುಳಿತಲ್ಲೇ ‘ಕಾಲು’ ಅಲ್ಲಾಡಿಸುತ್ತೀರಾ…? ಜೋಕೆ….! ಇರಬಹುದು ಈ ಖಾಯಿಲೆ ಲಕ್ಷಣ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?