![](https://kannadadunia.com/wp-content/uploads/2021/03/fastest-most-efficient-way-peel-fresh-ginger-root-no-knives-peelers-required.1280x600.jpg)
ಶುಂಠಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಅದರಲ್ಲೂ ಕೂಡ ಔಷಧೀಯ ಅಂಶಗಳು ಅಡಗಿವೆ. ಹಾಗಾಗಿ ಶುಂಠಿ ಸಿಪ್ಪೆಯನ್ನು ಎಸೆಯುವ ಬದಲು ಈ ಸಮಸ್ಯೆಗಳ ನಿವಾರಣೆಗೆ ಬಳಸಿಕೊಳ್ಳಿ.
*ಇದನ್ನು ಕೆಮ್ಮು ನಿವಾರಣೆಗೆ ಬಳಸಬಹುದು. ಶುಂಠಿ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದನ್ನು ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.
*ಇದರಲ್ಲಿ ರಂಜಕ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದನ್ನು ಎಸೆಯುವ ಬದಲು ಗಿಡಗಳಿಗೆ ಗೊಬ್ಬರವಾಗಿ ಬಳಸಿ. ಇದರಿಂದ ಚೆನ್ನಾಗಿ ಹೂ ಬಿಡುತ್ತದೆ.
*ಕೋಸುಗಡ್ಡೆ, ಹೂಕೋಸು, ಮೂಲಂಗಿ ಮುಂತಾದ ತರಕಾರಿಗಳನ್ನು ಬೇಯಿಸುವಾಗ ತುಂಬಾ ವಾಸನೆ ಬರುತ್ತದೆ. ಈ ವಾಸನೆಯನ್ನು ನಿವಾರಿಸಿ ಅಡುಗೆ ಪರಿಮಳವಾಗಿಸಲು ಶುಂಠಿ ಸಿಪ್ಪೆಯನ್ನು ಸೇರಿಸಿ ಬೇಯಿಸಿ.