ಸಿಂಗಾಪುರ ಹೋಟೆಲ್‌ ನಲ್ಲಿ ಸೆಕ್ಸ್ ವರ್ಕರ್ ಗಳ ದರೋಡೆ: ಇಬ್ಬರು ಭಾರತೀಯರಿಗೆ 5 ವರ್ಷ ಜೈಲು ಶಿಕ್ಷೆ

ಸಿಂಗಾಪುರ: ಸಿಂಗಾಪುರದಲ್ಲಿ ಹೋಟೆಲ್ ಕೋಣೆಗಳಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ದರೋಡೆ ಮಾಡಿ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಭಾರತದ ಇಬ್ಬರು ಪುರುಷರಿಗೆ ಶುಕ್ರವಾರ ತಲಾ ಐದು ವರ್ಷ ಮತ್ತು ಒಂದು ತಿಂಗಳ ಜೈಲು ಶಿಕ್ಷೆ ಜೊತೆಗೆ 12 ಬೆತ್ತದ ಹೊಡೆತಗಳನ್ನು ವಿಧಿಸಲಾಯಿತು.

23 ವರ್ಷದ ಅರೋಗ್ಯಸಾಮಿ ಡೈಸನ್ ಮತ್ತು 27 ವರ್ಷದ ರಾಜೇಂದ್ರನ್ ಮಯಿಲರಸನ್ ಅವರು ದರೋಡೆ ಮಾಡುವಾಗ ನೋವುಂಟು ಮಾಡಿದ್ದಕ್ಕಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಆರೋಗ್ಯಸಾಮಿ ಮತ್ತು ರಾಜೇಂದ್ರನ್ ಏಪ್ರಿಲ್ 24 ರಂದು ರಜೆಗಾಗಿ ಭಾರತದಿಂದ ಸಿಂಗಾಪುರಕ್ಕೆ ಆಗಮಿಸಿದ್ದರು. ಎರಡು ದಿನಗಳ ನಂತರ, ಲಿಟಲ್ ಇಂಡಿಯಾ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿ ಲೈಂಗಿಕ ಸೇವೆಗಳಿಗಾಗಿ ವೇಶ್ಯೆಯರನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿದ್ದೀರಾ ಎಂದು ಕೇಳಿದ್ದಾರೆ.

ನಂತರ ಆ ವ್ಯಕ್ತಿ ಹೊರಡುವ ಮೊದಲು ಇಬ್ಬರು ಮಹಿಳೆಯರ ಸಂಪರ್ಕ ಮಾಹಿತಿಯನ್ನು ಅವರಿಗೆ ನೀಡಿದ್ದಾರೆ.

ಆರೋಗ್ಯಸಾಮಿ ರಾಜೇಂದ್ರನ್ ಅವರಿಗೆ ಹಣದ ಅಗತ್ಯವಿದೆ ಎಂದು ಹೇಳಿದ್ದು, ಮಹಿಳೆಯರನ್ನು ಸಂಪರ್ಕಿಸಿ ಹೋಟೆಲ್ ಕೋಣೆಯಲ್ಲಿ ದರೋಡೆ ಮಾಡಲು ಸೂಚಿಸಿದ್ದಾರೆ, ರಾಜೇಂದ್ರನ್ ಅದಕ್ಕೆ ಒಪ್ಪಿಕೊಂಡರು. ಆ ದಿನ ಸಂಜೆ 6 ಗಂಟೆಯ ಸುಮಾರಿಗೆ ಹೋಟೆಲ್ ಕೋಣೆಯಲ್ಲಿ ಒಬ್ಬ ಮಹಿಳೆಯನ್ನು ಭೇಟಿಯಾಗಲು ಅವರು ವ್ಯವಸ್ಥೆ ಮಾಡಿಕೊಂಡರು.

ಕೋಣೆಯೊಳಗೆ ಪ್ರವೇಶಿಸಿದ ಅವರು, ಮಹಿಳೆ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಆಕೆಗೆ ಕಪಾಳಮೋಕ್ಷ ಮಾಡಿದರು. ಆಕೆಯ ಆಭರಣಗಳು, 2,000 ಸಿಂಗಾಪುರ ಡಾಲರ್ ನಗದು, ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ದೋಚಿದರು.

ಆ ರಾತ್ರಿ, ರಾತ್ರಿ 11 ಗಂಟೆ ಸುಮಾರಿಗೆ, ಅವರು ಮತ್ತೊಂದು ಹೋಟೆಲ್‌ನಲ್ಲಿ ಎರಡನೇ ಮಹಿಳೆಯೊಂದಿಗೆ ಭೇಟಿ ನಿಗದಿ ಮಾಡಿ ಆಕೆ ಬಂದಾಗ ಆಕೆಯ ತೋಳುಗಳನ್ನು ಹಿಡಿದು ಎಳೆದೊಯ್ದು ದರೋಡೆ ಮಾಡಿದ್ದರು. ರಾಜೇಂದ್ರನ್ ಆಕೆಯ ಕಿರುಚಾಟವನ್ನು ತಡೆಯಲು ಆಕೆಯ ಬಾಯಿಯನ್ನು ಮುಚ್ಚಿದ್ದ.

ಅವರು 800 ಸಿಂಗಾಪುರ ಡಾಲರ್ ನಗದು, ಎರಡು ಮೊಬೈಲ್ ಫೋನ್‌ಗಳು ಮತ್ತು ಪಾಸ್‌ಪೋರ್ಟ್ ಅನ್ನು ಕದ್ದರು, ಅವರು ಹಿಂತಿರುಗುವವರೆಗೆ ಕೋಣೆಯಿಂದ ಹೊರಹೋಗದಂತೆ ಬೆದರಿಕೆ ಹಾಕಿದ್ದರು.

ನನ್ನ ತಂದೆ ಕಳೆದ ವರ್ಷ ನಿಧನರಾದರು. ನನಗೆ ಮೂವರು ಸಹೋದರಿಯರಿದ್ದಾರೆ, ಅವರಲ್ಲಿ ಒಬ್ಬರಿಗೆ ಮದುವೆಯಾಗಿದೆ, ಮತ್ತು ನಮ್ಮ ಬಳಿ ಹಣವಿಲ್ಲ. ಅದಕ್ಕಾಗಿಯೇ ನಾವು ಇದನ್ನು ಮಾಡಿದ್ದೇವೆ ಎಂದು ದುಭಾಷಿಯೊಬ್ಬರ ಮೂಲಕ ಮಾತನಾಡಿದ ಆರೋಗ್ಯಸಾಮಿ ಹೇಳಿದ್ದಾರೆ. ನನ್ನ ಹೆಂಡತಿ ಮತ್ತು ಮಗು ಭಾರತದಲ್ಲಿ ಒಂಟಿಯಾಗಿದ್ದು, ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ರಾಜೇಂದ್ರನ್ ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಶಿಕ್ಷೆ ಹಾಗೂ ಬೆತ್ತದ ಹೊಡೆತ ನೀಡಲು ಆದೇಶಿಸಿದೆ. ದರೋಡೆಯ ಸಮಯದಲ್ಲಿ ಗಾಯಗೊಳಿಸುವವರಿಗೆ 5ರಿಂದ 20 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 12 ಬೆತ್ತದ ಹೊಡೆತಗಳನ್ನು ಎದುರಿಸಬೇಕಾಗುತ್ತದೆ ಎಂದು ಸಿಂಗಾಪುರ್ ಡೈಲಿ ವರದಿ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read