BREAKING : ಬೆಂಗಳೂರಲ್ಲಿ ಸೀರೆ ಕದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿ ‘ಕ್ರೌರ್ಯ’ ಮೆರೆದಿದ್ದ ‘ಬಟ್ಟೆ ಅಂಗಡಿ’ ಮಾಲೀಕ ಅರೆಸ್ಟ್ |WATCH VIDEO

ಬೆಂಗಳೂರು : ಬೆಂಗಳೂರಲ್ಲಿ ಸೀರೆ ಕದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿ ‘ಕ್ರೌರ್ಯ’ ಮೆರೆದಿದ್ದ ‘ಬಟ್ಟೆ ಅಂಗಡಿ’ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಉಮೇದ್ ರಾಮ್ ಎಂದು ಗುರುತಿಸಲಾಗಿದೆ. ಕೆ.ಆರ್ ಮಾರ್ಕೆಟ್ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಹಂಪಮ್ಮ ಎಂಬ ಮಹಿಳೆ 50 ಕ್ಕೂ ಹೆಚ್ಚು ಸೀರೆ ಕದ್ದಿದ್ದಾಳೆ ಎಂದು ಆರೋಪಿಸಿ ಹಲ್ಲೆ ನಡೆಸಿ ವಿಡಿಯೋ ವೈರಲ್ ಮಾಡಲಾಗಿತ್ತು.

ಸೀರೆ ಕದ್ದಿದ್ದಾರೆ ಎಂದು ಆರೋಪಿಸಿ ಬಟ್ಟೆ ಅಂಗಡಿ ಮಾಲೀಕರು ಮಹಿಳೆಗೆ ಒದ್ದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಾಲೀಕ ತನ್ನ ಸಿಬ್ಬಂದಿಗಳ ಜೊತೆ ಮಹಿಳೆಗೆ ಒದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಹಿಳೆ ನೋವಿನಿಂದ ನರಳುತ್ತಿದ್ದರೂ ಕಿಂಚಿತ್ತೂ ಕರುಣೆ ತೋರದೇ ರಾಕ್ಷಸರಂತೆ ವರ್ತಿಸಿದ್ದಾರೆ. ಸಾರ್ವಜನಿಕರು ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಾಲೀಕ ಹಗಲು ಹೊತ್ತಿನಲ್ಲಿ ಮಹಿಳೆಯ ಗುಪ್ತಾಂಗಕ್ಕೆ ತನ್ನ ಶೂನಿಂದ ಒದ್ದಿದ್ದಾನೆ. ಅಂಗಡಿಯ ಹಲವಾರು ಸಿಬ್ಬಂದಿ ಕೂಡ ಇದರಲ್ಲಿ ಭಾಗಿಯಾಗಿ, ಆಕೆ ಕಿರುಚುತ್ತಾ ನೋವಿನಿಂದ ನರಳುತ್ತಿದ್ದಾಗ ನಿರ್ದಯವಾಗಿ ಥಳಿಸಿದ್ದಾರೆ. ಇಡೀ ಅಮಾನವೀಯ ಹಲ್ಲೆಯನ್ನು ಪಕ್ಕದಲ್ಲಿದ್ದ ವ್ಯಕ್ತಿಯ ಮೊಬೈಲ್ ಫೋನ್ನಲ್ಲಿ ಸೆರೆಹಿಡಿಯಲಾಗಿದ್ದು, ಇದು ವೈರಲ್ ಆಗಿದ್ದು, ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶ ಮತ್ತು ಖಂಡನೆಗೆ ಕಾರಣವಾಗಿದೆ. ಈ ಘಟನೆಯನ್ನು ಇನ್ನಷ್ಟು ಆಘಾತಕಾರಿಯನ್ನಾಗಿ ಮಾಡಿರುವುದು ಪೊಲೀಸರ ನಡವಳಿಕೆ. ಮಹಿಳೆಯನ್ನು ರಕ್ಷಿಸುವ ಮತ್ತು ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳುವ ಬದಲು, ಕೆ.ಆರ್. ಮಾರ್ಕೆಟ್ ಪೊಲೀಸರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯ ದೂರು ದಾಖಲಿಸುವ ಬದಲು, ಅವರು ಅಂಗಡಿ ಮಾಲೀಕರ ಪರವಾಗಿ ನಿಂತು, ಮಹಿಳೆಯ ಮೇಲೆ ಕಳ್ಳತನದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ, ಸರಿಯಾದ ಪ್ರಾಥಮಿಕ ತನಿಖೆಯನ್ನು ನಡೆಸದೆ ಜೈಲಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read