ಕಠ್ಮಂಡುವಿನಲ್ಲಿ ಭಾರತೀಯ ಯಾತ್ರಿಕರಿದ್ದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲಿನ ದಾಳಿ ನಡೆದಿದ್ದು, ಹಲವರಿಗೆ ಗಾಯಗಳಾಗಿದೆ.ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ಗುರುವಾರ ಕಠ್ಮಂಡು ಬಳಿ ಆಂಧ್ರಪ್ರದೇಶದ ಭಾರತೀಯ ಯಾತ್ರಿಕರ ಬಸ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದುಷ್ಕರ್ಮಿಗಳು ಹಲವಾರು ಜನರ ವಸ್ತುಗಳನ್ನು ದೋಚಿದ್ದಾರೆ. ಯಾತ್ರಿಕರು ಕಠ್ಮಂಡುವಿನ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಬಸ್ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿತ್ತು. ದಾಳಿಯಲ್ಲಿ ಏಳರಿಂದ ಎಂಟು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನೇಪಾಳದ ಸೇನಾ ಸಿಬ್ಬಂದಿ ಸಿಲುಕಿಕೊಂಡಿದ್ದ ಭಾರತೀಯ ಪ್ರಯಾಣಿಕರ ರಕ್ಷಣೆಗೆ ಬಂದರು. ಬಸ್ ಸಿಬ್ಬಂದಿ ಶ್ಯಾಮು ನಿಶಾದ್ ಅವರ ಪ್ರಕಾರ, ಭಾರತ ಸರ್ಕಾರವು ನಂತರ ಪ್ರಯಾಣಿಕರನ್ನು ದೆಹಲಿಗೆ ವಿಮಾನದಲ್ಲಿ ಸಾಗಿಸಿತು. ಭಾರತಕ್ಕೆ ಹಿಂತಿರುಗುತ್ತಿದ್ದಾಗ ಬಸ್ ಮೇಲೆ ದಾಳಿ ನಡೆಸಲಾಯಿತು.
I am deeply alarmed by the escalating turmoil in Nepal that has placed our citizens in grave peril, including India’s volleyball athlete Ms. Upasana Gill from Pokhara. Her harrowing account,of her hotel being set ablaze and of mobs pursuing her with sticks,reveals the sheer… pic.twitter.com/RxIsA14YrQ
— Malvinder Singh Kang (@kang_malvinder) September 11, 2025