ಬೆಂಗಳೂರು: ಸೀಟ್ ಬೆಲ್ಟ್ ಹಾಕದೆ ಸಂಚಾರ ನಿಯಮ ಉಲ್ಲಂಘಿಸಿದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ಕಾರ್ ವಿರುದ್ಧ 7 ಪ್ರಕರಣ ದಾಖಲಾಗಿದ್ದು, ದಂಡಪಾವತಿಗೆ ಇರುವ ಶೇಕಡ 50 ರಿಯಾಯಿತಿ ಸೌಲಭ್ಯ ಬಳಸಿಕೊಂಡು ಅವರು ದಂಡ ಪಾವತಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬಳಸುವ ಸರ್ಕಾರಿ ಕಾರ್ ನ ಮೇಲೆ 2,000 ದಂಡ ಪಾವತಿಸಲಾಗಿದೆ. ಈ ಕಾರ್ ಮೇಲೆ ನಿಯಮ ಉಲ್ಲಂಘನೆ ಸಂಬಂಧ 7, ಕೇಸ್ ಗಳು ಬಾಕಿ ಇದ್ದು, 2000 ರೂ. ದಂಡ ಪಾವತಿಸಬೇಕಿತ್ತು. ಆರು ಬಾರಿ ಸೀಟ್ ಬೆಲ್ಟ್ ಧರಿಸದೆ, ಒಮ್ಮೆ ವೇಗದ ಚಾಲನೆಗೆ ದಂಡ ಹಾಕಲಾಗಿದೆ. ಸಿಎಂ ಅವರು ತಮ್ಮ ಕಾರ್ ನ ಮೇಲೆ ಹಾಕಿರುವ ದಂಡ ಪಾವತಿಸಿದ್ದಾರೆ ಎಂದು ಹೇಳಲಾಗಿದೆ.
Respected @CMofKarnataka @siddaramaiah sir,
— *ಆರ್ ಸಿ ಬೆಂಗಳೂರು | RC Bengaluru* (@RCBengaluru) September 3, 2025
Pending traffic violations on your official car..
Speeding, Not wearing seat belt..
Hope fines will be cleared.. btw.. 50% rebate is ON till 12/09
Be a #RoadSafety ambassador 👍
Safety first is our motto 🙏 https://t.co/yH8Ol017sv pic.twitter.com/kXEIsdLVZh