ಭಾರತ ರಾಷ್ಟ್ರ ಸಮಿತಿ (BRS) ಮಂಗಳವಾರ ಕೆ.ಕವಿತಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಒಂದು ದಿನದ ನಂತರ, ವಿಧಾನ ಪರಿಷತ್ ಸದಸ್ಯೆ (MLC ) ಬುಧವಾರ ತಮ್ಮ ಹುದ್ದೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇದಲ್ಲದೆ, ಕವಿತಾ ತಮ್ಮ ಅಮಾನತು “ನೋವುಂಟುಮಾಡಿದೆ” ಮತ್ತು “ನನ್ನನ್ನು ಬಿಆರ್ಎಸ್ ಪಕ್ಷದಿಂದ ಹಠಾತ್ತನೆ ಅಮಾನತುಗೊಳಿಸಿರುವುದು ತುಂಬಾ ನೋವಿನ ಸಂಗತಿ” ಎಂದು ಹೇಳಿದರು.
ನಾನು ಎಂಎಲ್ಸಿ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಕವಿತಾ ಅಮಾನತುಗೊಂಡ ಕುರಿತು ಮಾಧ್ಯಮಗಳನ್ನುದ್ದೇಶಿಸಿ ಹೇಳಿದರು. “ನಾನು ನನ್ನ ರಾಜೀನಾಮೆಯನ್ನು ಸ್ಪೀಕರ್ ಮತ್ತು (ಪಕ್ಷದ ಮುಖ್ಯಸ್ಥ ಮತ್ತು ಅವರ ತಂದೆ) ಕೆ ಚಂದ್ರಶೇಖರ್ ರಾವ್ ಅವರಿಗೆ ಕಳುಹಿಸುತ್ತಿದ್ದೇನೆ” ಎಂದು ಅವರು ಹೇಳಿದರು.
