ಗುಜರಾತ್ : ವಡೋದರಾದಲ್ಲಿ ಗಣೇಶ ಚತುರ್ಥಿ ಆಚರಣೆ ವೇಳೆ ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಮೊಟ್ಟೆ ಎಸೆದಿದ್ದಾರೆ. ಸೋಮವಾರ ರಾತ್ರಿ ನಗರದ ಸತ್ಯವಿಸ್ತಾರ್ ಪ್ರದೇಶದಲ್ಲಿ ಮೆರವಣಿಗೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ಗಣೇಶ ವಿಗ್ರಹದ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ.
ಘಟನೆ ಹಿನ್ನೆಲೆ ನಗರದಲ್ಲಿ ಉದ್ವಿಗ್ನತೆ ವಾತಾವರಣ ನಿರ್ಮಾಣವಾಗಿದ್ದು, . ಪೊಲೀಸ್ ಆಯುಕ್ತ ನರಸಿಂಹ ಕೋಮರ್ ಅವರ ಆದೇಶದ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
ಆರೋಪಿಗಳು ಕೈಗಳನ್ನು ಕಟ್ಟಿ, ಮೊಟ್ಟೆಗಳನ್ನು ಎಸೆದ ಅದೇ ಸ್ಥಳಕ್ಕೆ ಕರೆದೊಯ್ಯಲಾಯಿತು. ಮೊಣಕಾಲೂರಿ, ಅವರು ತಮ್ಮ ಕೃತ್ಯಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. ನಂತರ ಆರೋಪಿಗಳನ್ನ ಊರೆಲ್ಲಾ ಮೆರವಣಿಗೆ ಮಾಡಲಾಯಿತು.
ಬಂಧಿತ ವ್ಯಕ್ತಿಗಳಲ್ಲಿ ಸುಫಿಯಾನ್ ಅಲಿಯಾಸ್ ಗಾಮಾ ಸಲೀಂಬಾಯಿ ಮನ್ಸೂರಿ, ಶಹನವಾಜ್ ಅಲಿಯಾಸ್ ಬಾದ್ಬಾದ್ ಮೊಹಮ್ಮದ್ ಇರ್ಷಾದ್ ಖುರೇಷಿ ಮತ್ತು ಕಾನೂನಿನ ಸಂಘರ್ಷದಲ್ಲಿ ಭಾಗಿಯಾಗಿರುವ ಅಪ್ರಾಪ್ತ ವಯಸ್ಕ ಸೇರಿದ್ದಾರೆ. ಈ ಘಟನೆಯ ನಂತರ, ಪೊಲೀಸರು ಈ ಪ್ರದೇಶದಲ್ಲಿ ಗಸ್ತು ಮತ್ತು ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದ್ದಾರೆ.
A post shared by Ahmedabad Mirror (@ahmedabadmirrorofficial)