ಪ್ರವಾಸಿಗರಿಗೆ ಗುಡ್ ನ್ಯೂಸ್: ಪ್ರವಾಸಿ ತಾಣಗಳಿಗೆ KSRTC ವಿಶೇಷ ಸಾರಿಗೆ ಸೌಲಭ್ಯ

ದಾವಣಗೆರೆ: ಆಗಸ್ಟ್ 17 ರಿಂದ ಪ್ರತಿ ಭಾನುವಾರ, ರಜಾದಿನಗಳಂದು ದಾವಣಗೆರೆಯಿಂದ ಜೋಗ-ಸಿಗಂದೂರು ಮತ್ತು ಅಂಜನಾದ್ರಿಬೆಟ್ಟ-ಹಂಪಿ-ತುಂಗಾಭದ್ರಾ ಡ್ಯಾಂ ಹಾಗೂ ಇಂಡಗುಂಜಿ-ಅಪ್ಸರಕೊಂಡ ವಾಟರ್ ಫಾಲ್ಸ್-ಇಕೋಬೀಚ್‍ಗೆ ದಾವಣಗೆರೆ ಕೆಎಸ್‍ಆರ್‍ಟಿಸಿಯಿಂದ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಪ್ರಾರಂಭಿಸಲಾಗಿದೆ.

ದಾವಣಗೆರೆ, ಸಿಗಂದೂರು, ಇಕ್ಕೇರಿಕೋಟೆ, ವರದಮೂಲ, ಜೋಗಫಾಲ್ಸ್,ಗೆ 2 ಬದಿ ಸೇರಿ 600 ರೂ., ಮಕ್ಕಳಿಗೆ 460 ರೂ., ಇರುತ್ತದೆ.

ದಾವಣಗೆರೆ, ಅಂಜನಾದ್ರಿಬೆಟ್ಟ, ಹಂಪಿ, ತುಂಗಾಭದ್ರಾ ಡ್ಯಾಂಗೆ 2 ಬದಿ ಸೇರಿ 500 ರೂ., ಮಕ್ಕಳಿಗೆ 475 ರೂ.ಇರುತ್ತದೆ. ದಾವಣಗೆರೆಯಿಂದ ಹೊರಟು ಇಡಗುಂಜಿ, ಅಪ್ಸರಕೊಂಡ ವಾಟರ್ ಫಾಲ್ಸ್, ಇಕೋಬೀಚ್, ಬ್ಯಾಕ್ ವಾಟರ್ ಬೋಟಿಂಗ್‍ಗೆ 2 ಬದಿ ಸೇರಿ 685 ರೂ., ಮಕ್ಕಳಿಗೆ 515 ರೂ.ಇರುತ್ತದೆ.

 ಮುಂಗಡ ಬುಕ್ಕಿಂಗ್ ಕೌಂಟರ್ ಗಳಲ್ಲಿ ಬುಕ್ಕಿಂಗ್ ಮಾಡಲು ksrtc.karnataka.gov.in ಸೌಲಭ್ಯ ಪಡೆಯಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ್.ಎಫ್ ಬಸಾಪುರ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read