ಬೆಂಗಳೂರು : ಕನ್ನಡಿಗ , ಕರ್ನಾಟಕದ ಬಗ್ಗೆ ನಾಲಗೆ ಹರಿಬಿಟ್ಟಿದ್ದ ಹಿಂದಿವಾಲ ಮಿಥುನ್ ಅರೆಸ್ಟ್ ಆಗಿದ್ದಾನೆ.
ಕನ್ನಡಿಗ ಕೊರಿಯರ್ ಬಾಯ್ ಓರ್ವರನ್ನು ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬ ಅವಾಚ್ಯವಾಗಿ ನಿಂದಿಸಿರುವ ಘಟನೆ ನಡೆದಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮಿಥುನ್ ಸರ್ಕಾರ್ ಎಂಬಾತ ಫೋನ್ ಮೂಲಕ ಕನ್ನಡಿಗ ರಂಜಿತ್ ಕೊರಿಯರ್ ಬಾಯ್ ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದನು. ಹಿಂದಿವಾಲಾ ಮಿಥುನ್ ವಿರುದ್ಧ ಕೊರಿಯರ್ ಬಾಯ್ ದೂರು ನೀಡಿದ್ದರು, ಬೊಮ್ಮನಹಳ್ಳಿ ಠಾಣೆಯಲ್ಲಿ ಮಿಥುನ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.ಸದ್ಯ, ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.