ಬಿಲ್ ಕಟ್ಟದಿದ್ದಕ್ಕೆ ವಿದ್ಯುತ್ ಕಡಿತ: ಟ್ರಾನ್ಸ್ಫಾರ್ಮರ್ ಅನ್ನೇ ಕದ್ದು ಮನೆಗೆ ಕೊಂಡೊಯ್ದ ಕಿಲಾಡಿ

ಭೋಪಾಲ್: ಬಿಲ್ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ತಡೆಯಲು ವ್ಯಕ್ತಿಯೊಬ್ಬ ವಿದ್ಯುತ್ ಟ್ರಾನ್ಸ್ಫಾರ್ಮರ್ ಕದ್ದು ಮನೆಗೆ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಭಿಂಡ್ ಜಿಲ್ಲೆಯ ಮಧ್ಯ ಕ್ಷೇತ್ರ ವಿದ್ಯುತ್ ವಿತರಣಾ ಕಂಪನಿಯ ಅಸ್ವರ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ರಾವತ್ಪುರ ಗ್ರಾಮದ ಶ್ರೀರಾಮ್ ಬಿಹಾರಿ ತ್ರಿಪಾಠಿ ಎಂದು ಗುರುತಿಸಲಾದ ಆರೋಪಿ ತಾತ್ಕಾಲಿಕ ಕೃಷಿ ಬಳಕೆಗಾಗಿ ಸರ್ಕಾರಿ ಅನುದಾನ ಯೋಜನೆಯಡಿ ಸ್ಥಾಪಿಸಲಾದ 25 ಕೆವಿ ಟ್ರಾನ್ಸ್ಫಾರ್ಮರ್ ತೆಗೆದುಕೊಂಡು ಹೋಗಿದ್ದಾನೆ. ಡಿಸ್ಕಾಂನ ಸಂಪೂರ್ಣ ಒಡೆತನದ ಟ್ರಾನ್ಸ್ಫಾರ್ಮರ್ ಅನ್ನು ಕಿತ್ತುಹಾಕಿ ಅವರ ಮಗ ಸೋನು ತ್ರಿಪಾಠಿ ಸಹಾಯದಿಂದ ತೆಗೆದುಕೊಂಡು ಹೋಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾವತ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅಸ್ವರ್ ವಿತರಣಾ ಕೇಂದ್ರದ ಸಹಾಯಕ ವ್ಯವಸ್ಥಾಪಕ ಅಭಿಷೇಕ್ ಸೋನಿ, ಆರೋಪಿಯು 1,49,795 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾನೆ. ಬಾಕಿ ಪಾವತಿಸದ ಕಾರಣ ಟ್ರಾನ್ಸ್ಫಾರ್ಮರ್ ಅನ್ನು ವಶಪಡಿಸಿಕೊಳ್ಳಲಾಗುವುದು ಎಂದು ನಿರೀಕ್ಷಿಸಿ, ಆರೋಪಿ ವಿದ್ಯುತ್ ಲೈನ್ಗಳನ್ನು ಹಾಳು ಮಾಡಿ ಉಪಕರಣಗಳನ್ನು ತನ್ನ ನಿವಾಸದಲ್ಲಿ ಬಚ್ಚಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಅಧಿಕೃತ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಕ್ಕಾಗಿ ಕಂಪನಿಯು 2003 ರ ವಿದ್ಯುತ್ ಕಾಯ್ದೆಯ ಸೆಕ್ಷನ್ 136 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆದಾಗ್ಯೂ, ಕದ್ದ ಟ್ರಾನ್ಸ್ಫಾರ್ಮರ್ ಅನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read