ಜಾರ್ಖಂಡ್ ರಾಮ್ ಗಢದಲ್ಲಿ ನಡೆದ ಘಟನೆಯೊಂದರಲ್ಲಿ ರೈಲ್ವೆ ಹಳಿಯಲ್ಲಿ ಗರ್ಭಿಣಿ ಆನೆ ಮರಿಗೆ ಜನ್ಮ ನೀಡಿದೆ. ಇದಕ್ಕಾಗಿ ರೈಲ್ವೆ ಮತ್ತು ಅರಣ್ಯ ಅಧಿಕಾರಿಗಳು ಕಲ್ಲಿದ್ದಲು ತುಂಬಿದ ಸರಕು ರೈಲನ್ನು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿಲ್ಲಿಸಿದ್ದಾರೆ.
ಈ ಮಾನವೀಯ ಘಟನೆ ಬರ್ಕಕಾನಾ ಮತ್ತು ಹಜಾರಿಬಾಗ್ ರೈಲು ನಿಲ್ದಾಣದ ನಡುವಿನ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ರೈಲು ಮಾರ್ಗವನ್ನು ಹೆಚ್ಚಾಗಿ ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ, ಆದ್ದರಿಂದ 2 ಗಂಟೆಗಳ ವಿಳಂಬದಿಂದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.
ಎರಡು ವಾರಗಳ ಹಿಂದೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ, ಆ ಪ್ರದೇಶವನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಅರಣ್ಯ ಅಧಿಕಾರಿಗಳು ಹಳಿಗಳ ಮೇಲೆ ಆನೆಯನ್ನು ಗಮನಿಸಿದ್ದಾರೆ. ಹೆಣ್ಣು ಆನೆ ಹೆರಿಗೆ ನೋವು ಅನುಭವಿಸುತ್ತಿದೆ ಮತ್ತು ಮರಿಯನ್ನು ಹೆರಿಗೆ ಮಾಡಲು ಹಳಿಗಳ ಮೇಲೆ ಮಲಗಿದೆ ಎಂದು ಅವರು ನೋಡಿದ್ದಾರೆ.
ಜಂಬೋ ಮತ್ತು ಅದರ ಮರಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅರಣ್ಯ ಅಧಿಕಾರಿಗಳು, ನಿಗದಿತ ರೈಲು ನಿಲ್ಲಿಸುವಂತೆ ವಿನಂತಿಸಲು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಬೆಳಿಗ್ಗೆ 3 ಗಂಟೆಗೆ ನಮ್ಮ ಅರಣ್ಯ ಸಿಬ್ಬಂದಿ ಗರ್ಭಿಣಿ ಹೆಣ್ಣು ಆನೆ ಹೆರಿಗೆ ನೋವಿನಿಂದ ಹಳಿಗಳ ಮೇಲೆ ಮಲಗಿದೆ ಎಂದು ನನಗೆ ತಿಳಿಸಿದರು. ಅದು ರೈಲಿಗೆ ಸಿಲುಕಬಹುದು ಎಂದು ಅವರು ಎಚ್ಚರಿಸಿದರು. ಮಾರ್ಗದಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ನಿಲ್ಲಿಸುವಂತೆ ನನ್ನನ್ನು ಕೇಳಿಕೊಂಡರು ಎಂದು ರಾಮಗಢದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ನಿತೀಶ್ ಕುಮಾರ್ ಹೇಳಿದ್ದಾರೆ.
ಅವರು ತಕ್ಷಣ ಬರ್ಕಕಾನಾದಲ್ಲಿರುವ ರೈಲ್ವೆ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಆನೆ ಹೆರಿಗೆ ಮಾಡಿ ಹಳಿಯಿಂದ ಹೊರಡುವವರೆಗೆ ರೈಲುಗಳನ್ನು ಎರಡು ಗಂಟೆಗಳ ಕಾಲ ನಿಲ್ಲಿಸಲಾಯಿತು.
ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
Beyond the news of human-animal conflicts, happy to share this example of human-animal harmonious existence.
— Bhupender Yadav (@byadavbjp) July 9, 2025
A train in Jharkhand waited for two hours as an elephant delivered her calf. The 📹 shows how the two later walked on happily.
Following a whole-of government approach,… pic.twitter.com/BloyChwHq0