ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ಹಾವು ಕಚ್ಚಿ ತಾಯಿ, ಮಗ ಮೃತಪಟ್ಟಿದ್ದಾರೆ.
ಸುಬ್ಬಮ್ಮ(35), ಅವರ ಪುತ್ರ ಬಸವರಾಜ(10) ಮೃತಪಟ್ಟವರು. ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಸುಬ್ಬಮ್ಮ ಮತ್ತು ಬಸವರಾಜ ಅವರಿಗೆ ಹಾವು ಕಚ್ಚಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಉಳಿದವರು ಬೇರೆ ಕಡೆ ಮಲಗಿದ್ದರು. ಮೃತ ಸುಬ್ಬಮ್ಮ ಅವರಿಗೆ ಪತಿ, ಮತ್ತೊಬ್ಬ ಪುತ್ರ ಇದ್ದಾರೆ. ಹೇರುಂಡಿಯಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.