BREAKING: ಕಸದ ಲಾರಿಗೆ ಶವ ಎಸೆದ ಕೇಸ್: ಆರೋಪಿ ಅರೆಸ್ಟ್: ವಿಚಿತ್ರ ಪ್ರೇಮ್ ಕಹಾನಿ ಬೆಳಕಿಗೆ

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆ ಕೊಲೆ ಮಾಡಿ ಶವವನ್ನು ಕಸದ ಲಾರಿಗೆ ಬಿಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಹುಳಿಮಾವು ನಿವಾಸಿ ಆಶಾ ಕೊಲೆಯಾದ ಮಹಿಳೆ. ಆರೋಪಿ ಸಂಶುದ್ದೀನ್ ನನ್ನು ಸಿಕೆ ಅಚ್ಚುಕಟ್ಟು ಠಾಣೆ  ಪೊಲೀಸರು ಬಂಧಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಆರೋಪಿ ಸಂಶುದ್ದೀನ್ ಬಂಧಿಸಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿ ಆರೋಪಿ ಬಂಧಿಸಿದ್ದಾರೆ.

ಅರ್ಬನ್ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರ ನಡುವೆ ಪರಿಚಯವಾಗಿತ್ತು. ಆಶಾ – ಸಂಶುದ್ದೀನ್ ಅವರದು ವಿಚಿತ್ರ ಪ್ರೇಮ್ ಕಹಾನಿ. ಆಶಾ ಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ಕೊಲೆ ಆರೋಪಿ ಸಂಶುದ್ದೀನ್ ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸಂಶುದ್ದೀನ್ ಪತ್ನಿ ಮತ್ತು ಮಕ್ಕಳು ಅಸ್ಸಾಂನಲ್ಲಿ ವಾಸವಾಗಿದ್ದಾರೆ.

ಆಶಾ ಜೊತೆಗೆ ಸಂಶುದ್ದೀನ್ ಲಿವಿಂಗ್ ಟುಗೆದರ್ ನಲ್ಲಿದ್ದ. ಹುಳಿಮಾವಿನಲ್ಲಿ ಮನೆ ಮಾಡಿಕೊಂಡು ಸಂಶುದ್ದೀನ್ ಜೊತೆಗೆ ವಾಸವಿದ್ದ ಆಶಾ ಪದೇ ಪದೇ ಜಗಳ ಮಾಡುತ್ತಿದ್ದರು. ಜಗಳ ಅತಿರೇಖಕ್ಕೆ ತಿರುಗಿ ಕತ್ತು ಹಿಸುಕಿ ಆಶಾ ಕೊಲೆ ಮಾಡಿದ ಸಂಶುದ್ದೀನ್ ಮೃತದೇಹವನ್ನು ಬೈಕಿನಲ್ಲಿ ಇಟ್ಟುಕೊಂಡು ಬಂದಿದ್ದ. ಅದನ್ನು ಕಸದ ಲಾರಿಯಲ್ಲಿ ಬಿಸಾಕಿ ಪರಾರಿಯಾಗಿದ್ದ.  ಮೃತಳ ಗುರುತು ಪತ್ತೆ ಮಾಡಿದ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read