BREAKING : ಈ ಬಾರಿ ಸಿದ್ದರಾಮಯ್ಯ ಅಲ್ಲ, ಹೊಸ ‘CM’ ‘ಮೈಸೂರು ದಸರಾ’ ಮಾಡ್ತಾರೆ : R. ಅಶೋಕ್ ಸ್ಪೋಟಕ ಹೇಳಿಕೆ

ಮೈಸೂರು : ಈ ಬಾರಿ ಸಿದ್ದರಾಮಯ್ಯ ‘ಮೈಸೂರು ದಸರಾ’ ಮಾಡಲ್ಲ, ಹೊಸ ಸಿಎಂ ದಸರಾ ಮಾಡುತ್ತಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ”ಈ ಬಾರಿ ಸಿಎಂ ಬದಲಾವಣೆಯಾಗುತ್ತಾರೆ. ಸಿದ್ದರಾಮಯ್ಯ ಮೈಸೂರು ದಸರಾ ಮಾಡಲ್ಲ, ಹೊಸ ಸಿಎಂ ಮೈಸೂರು ದಸರಾ ಮಾಡುತ್ತಾರೆ”. ಸಿಎಂ ಕುರ್ಚಿಗಾಗಿ ಅವರ ನಡುವೆ ಕಚ್ಚಾಟ ನಡೆಯುತ್ತಿದೆ. ಇದು ಟ್ರೇಲರ್ ಅಷ್ಟೇ , ಪಿಚ್ಚರ್ ಮುಂದೆ ಇದೆ. ಸಿಎಂ ಬದಲಾವಣೆಯಾಗುತ್ತಾರೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ, ಈ ಬಾರಿ ಹೊಸ ಸಿಎಂ ದಸರಾ ಮಾಡುತ್ತಾರೆ’ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಸಂವಿಧಾನದ ಪಾಠ ಕಲಿಯಬೇಕಾಗಿಲ್ಲ : ಅಶೋಕ್

ರಾಷ್ಟ್ರೀಯ ಸಂಪತ್ತಿನಲ್ಲಿ ಮೊದಲ ಹಕ್ಕು ಮುಸ್ಲಿಮರದ್ದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದರಲ್ಲ, ನಿಮ್ಮ ಕಾಂಗ್ರೆಸ್ ಪಕ್ಷದ ಪ್ರಕಾರ ಜಾತ್ಯತೀತತೆ ಅಂದರೆ ಅದೇನಾ? “ಬಡತನ ಎಂದರೆ ಆಹಾರ, ಹಣ ಅಥವಾ ವಸ್ತುವಿನ ಕೊರತೆ ಅಲ್ಲ, ಅದು ಒಂದು ಮನಸ್ಥಿತಿ” ಎಂದು ನಿಮ್ಮ ಪರಮೋಚ್ಚ ನಾಯಕ ರಾಹುಲ್ ಗಾಂಧಿ ಅವರು ಬಡತನವನ್ನ ವ್ಯಾಖ್ಯಾನ ಮಾಡಿದ್ದರಲ್ಲ, ನಿಮ್ಮ ಕಾಂಗ್ರೆಸ್ ಪಕ್ಷದ ಪ್ರಕಾರ ಸಮಾಜವಾದ ಅಂದರೆ ಇದೇನಾ? ಆರ್ ಎಸ್ಎಸ್ ನಂತಹ ಒಂದು ಅಪ್ಪಟ ರಾಷ್ಟ್ರೀಯವಾದಿ, ನಿಸ್ವಾರ್ಥ ಸಂಘಟನೆ ಮಾತನಾಡುವ ನೈತಿಕತೆಯಾಗಲಿ, ವಿಶ್ವಾಸಾರ್ಹತೆಯಾಗಲಿ ತಮಗಿಲ್ಲ. ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನೇ ಬಂದೀಖಾನೆ ಮಾಡಿದ ಕಾಂಗ್ರೆಸ್ ಪಕ್ಷದಿಂದ ಆರ್ ಎಸ್ಎಸ್ ಅಥವಾ ಬಿಜೆಪಿ ಸಂವಿಧಾನದ ಪಾಠ ಕಲಿಯಬೇಕಾಗಿಲ್ಲ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read