ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ 3 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸುವಂತೆ ಏರ್ ಇಂಡಿಯಾಕ್ಕೆ ಡಿಜಿಸಿಎ ನಿರ್ದೇಶನ ನೀಡಿದೆ. ಹೌದು, ಏರ್ ಇಂಡಿಯಾದ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಆದೇಶಿಸಿದೆ.
ವಿಮಾನ ಸಿಬ್ಬಂದಿಯ ವೇಳಾಪಟ್ಟಿಯಲ್ಲಿ ಗಂಭೀರ ಮತ್ತು ಪುನರಾವರ್ತಿತ ತಪ್ಪುಗಳಿಂದಾಗಿ DGCA ಈ ಕ್ರಮ ಕೈಗೊಂಡಿದೆ. ಈ ಪ್ರಕರಣ ಸಂಬಂಧ ಇದೀಗ DGCA ಏರ್ ಇಂಡಿಯಾ ವಿರುದ್ಧ ಮೊದಲ ಕ್ರಮ ಕೈಗೊಂಡಿದೆ. ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ. ಜೂನ್ 20 ರಂದು ಡಿಜಿಸಿಎ ಹೊರಡಿಸಿದ ಆದೇಶದ ಪ್ರಕಾರ, ಏರ್ ಇಂಡಿಯಾ ತನ್ನ ವಿಮಾನ ಸಿಬ್ಬಂದಿಯ ವೇಳಾಪಟ್ಟಿ ಮತ್ತು ಕಾರ್ಯಾಚರಣೆಯಲ್ಲಿ ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ.
ವಿಮಾನಯಾನ ನಿಯಂತ್ರಕವು ಈ ಅಧಿಕಾರಿಗಳ ವಿರುದ್ಧ ವಿಳಂಬವಿಲ್ಲದೆ ಆಂತರಿಕ ಶಿಸ್ತಿನ ಕ್ರಮಗಳನ್ನು ಪ್ರಾರಂಭಿಸಬೇಕು ಮತ್ತು ಅಂತಹ ಪ್ರಕ್ರಿಯೆಗಳ ಫಲಿತಾಂಶವನ್ನು 10 ದಿನಗಳಲ್ಲಿ ವರದಿ ಮಾಡಬೇಕು ಎಂದು ಆದೇಶಿಸಿದೆ.
ಡಿಜಿಸಿಎ ಹೊರಡಿಸಿದ ಪತ್ರವು, ವೇಳಾಪಟ್ಟಿ ಪದ್ಧತಿಗಳಲ್ಲಿ ಸರಿಪಡಿಸುವ ಸುಧಾರಣೆಗಳ ತೀರ್ಮಾನದವರೆಗೆ ಅಧಿಕಾರಿಗಳನ್ನು ಕಾರ್ಯಾಚರಣೆಯೇತರ ಪಾತ್ರಗಳಿಗೆ ಮರು ನಿಯೋಜಿಸಲಾಗುವುದು ಮತ್ತು ಮುಂದಿನ ಸೂಚನೆ ಬರುವವರೆಗೆ ವಿಮಾನ ಸುರಕ್ಷತೆ ಮತ್ತು ಸಿಬ್ಬಂದಿ ಅನುಸರಣೆಯ ಮೇಲೆ ನೇರ ಪ್ರಭಾವ ಬೀರುವ ಯಾವುದೇ ಹುದ್ದೆಯನ್ನು ಹೊಂದಿರಬಾರದು ಎಂದು ಹೇಳಿದೆ.