ಕೆಲಸದ ವೇಳೆಯಲ್ಲೇ ಅವಘಡ: ಸೋಲಾರ್ ಘಟಕದಲ್ಲಿ ಸ್ಪಾರ್ಕ್ ಉಂಟಾಗಿ ನಾಲ್ವರು ಕಾರ್ಮಿಕರಿಗೆ ಗಾಯ

ತುಮಕೂರು: ಸೋಲಾರ್ ಘಟಕದಲ್ಲಿ ಕೆಲಸದ ವೇಳೆ ಸ್ಪಾರ್ಕ್ ಉಂಟಾಗಿ ನಾಲ್ವರು ಕಾರ್ಮಿಕರು ಗಾಯಗೊಂಡ ಘಟನೆ ಎಂಟು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಎಂಟರಾಯನಹಳ್ಳಿ ಸಮೀಪ ನಡೆದಿದೆ.

ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಗೇಂದ್ರ, ಮಹಾಂತೇಶ, ಮಹೇಂದ್ರ ಚೇತನ್ ರೆಡ್ಡಿ ಅವರಿಗೆ ಸುಟ್ಟ ಗಾಯಗಳಾಗಿವೆ. ಮೈತಲಿ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಈ ನಾಲ್ವರು ಬಂದಿದ್ದರು.

ಗುತ್ತಿಗೆದಾರ ನಾಗರಾಜನ ಮೂಲಕ ನಾಲ್ವರು ಯುವಕರು ಕೆಲಸಕ್ಕೆ ಬಂದಿದ್ದರು. ಕೆಲಸದ ವೇಳೆ ವೈರ್ ಕಟ್ ಮಾಡುವಾಗ ದುರ್ಘಟನೆ ಸಂಭವಿಸಿದೆ. ನಾಲ್ವರು ಯುವಕರ ಮುಖ, ದೇಹ ಕೈಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಮಹಾಂತೇಶ ಮತ್ತು ಚೇತನ್ ಅವರಿಗೆ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಮಹೇಂದ್ರ ಮತ್ತು ನಾಗೇಂದ್ರ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read