ರಾಜಸ್ಥಾನ : ಏ. 22 ರ ಫಹಲ್ಗಾಮ್ ಉಗ್ರರ ದಾಳಿಗೆ 22 ನಿಮಿಷಗಳಲ್ಲಿ ಉತ್ತರ ಕೊಟ್ಟಿದ್ದೇವೆ ಎಂದು ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಗುಡುಗಿದ್ದಾರೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತ ಯಶಸ್ವಿಯಾಗಿ ಆಪರೇಷನ್ ಸಿಂಧೂರ್ ನಡೆಸಿದ ನಂತರ ರಾಜಸ್ಥಾನಕ್ಕೆ ತಮ್ಮ ಮೊದಲ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, “22 ಕೆ ಹಮ್ಲೇ ಕಾ ಜ್ವಾಬ್, 22 ನಿಮಿಷ ಮೇ ಆತಂಕಿ ಠಿಕಾಣೆ ತಬಾಹ್… (ಏಪ್ರಿಲ್ 22 ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು 22 ನಿಮಿಷಗಳಲ್ಲಿ ಪ್ರತೀಕಾರ ತೀರಿಸಿಕೊಂಡಿತು)” ಎಂದು ಪ್ರತಿಪಾದಿಸಿದರು. ರಾಜಸ್ಥಾನದ ಬಿಕಾನೇರ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಏಪ್ರಿಲ್ 22 ರ ದಾಳಿಗೆ ಪ್ರತಿಕ್ರಿಯೆಯಾಗಿ, ನಾವು ಭಯೋತ್ಪಾದಕರ ಒಂಬತ್ತು ದೊಡ್ಡ ಅಡಗುತಾಣಗಳನ್ನು 22 ನಿಮಿಷಗಳಲ್ಲಿ ನಾಶಪಡಿಸಿದ್ದೇವೆ. ಸಿಂಧೂರವು ಬಂದೂಕಿನ ಪುಡಿಯಾಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ವಿಶ್ವದ ಮತ್ತು ದೇಶದ ಶತ್ರುಗಳು ನೋಡಿದ್ದಾರೆ” ಎಂದು ಹೇಳಿದರು.
ಏಪ್ರಿಲ್ 22 ರಂದು, ನಮ್ಮ ಸಹೋದರಿಯರ ಧರ್ಮದ ಬಗ್ಗೆ ಕೇಳಿದ ನಂತರ ಭಯೋತ್ಪಾದಕರು ಅವರ ಹಣೆಯಿಂದ ಸಿಂಧೂರವನ್ನು ತೆಗೆದರು. ಪಹಲ್ಗಾಮ್ನಲ್ಲಿ ಗುಂಡು ಹಾರಿಸಲಾಯಿತು, ಆದರೆ 140 ಕೋಟಿ ಭಾರತೀಯರು ನೋವನ್ನು ಅನುಭವಿಸಿದರು” ಎಂದು ಪ್ರಧಾನಿ ಮೋದಿ ಹೇಳಿದರು.
ಆಪರೇಷನ್ ಸಿಂಧೂರ್ ಯಶಸ್ಸಿನ ಬಗ್ಗೆ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, “ಸಿಂಧೂರವನ್ನು ಅಳಿಸಲು ಹೊರಟವರನ್ನು ಮಣ್ಣಿನಲ್ಲಿ ಹೂತುಹಾಕಲಾಗಿದೆ. ಭಾರತದ ರಕ್ತ ಚೆಲ್ಲುವವರ ಖಾತೆಗಳು ಇತ್ಯರ್ಥವಾಗಿವೆ. ಭಾರತ ಮೌನವಾಗಿರುತ್ತದೆ ಎಂದು ಭಾವಿಸಿದ್ದವರು ಇಂದು ತಮ್ಮ ಮನೆಗಳಲ್ಲಿ ಅಡಗಿಕೊಂಡಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆಪಡುತ್ತಿದ್ದವರು ಇಂದು ಅದರ ಅವಶೇಷಗಳಲ್ಲಿ ಹೂತುಹೋಗಿದ್ದಾರೆ” ಎಂದು ಹೇಳಿದರು.
#WATCH | Rajasthan | Addressing a public rally in Deshnoke, Bikaner, PM Modi says, "… 22 tareekh ke hamle ke jawab mein, humne 22 minutes mein aatankiyon ke 9 sabse bade thikane tabaah kar diye… Duniya aur desh ke dushmanon ne dekh liya ki jab sindoor Barood ban jata hai to… pic.twitter.com/Q1FSqGQ7jt
— ANI (@ANI) May 22, 2025