ALERT : ರೈಲ್ವೇ  ಪ್ರಯಾಣಿಕರೇ  ಎಚ್ಚರ : ಅನಗತ್ಯವಾಗಿ ರೈಲಿನ ಚೈನ್ ಎಳೆದರೆ ದಂಡ, ಜೈಲು ಶಿಕ್ಷೆ ಫಿಕ್ಸ್..!

ಬೆಂಗಳೂರು: ಪ್ರತಿನಿತ್ಯ ಸುಮಾರು ಮೂರು ಕೋಟಿ ಪ್ರಯಾಣಿಕರನ್ನು ಹೊತ್ತೊಯ್ಯುವ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವಾಗ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಾದ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಉಲ್ಲಂಘಿಸಿದರೆ, ರೈಲ್ವೆ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳುತ್ತದೆ. ರೈಲುಗಳಲ್ಲಿ ತುರ್ತು ಸಂದರ್ಭಗಳಿಗಾಗಿ ಸರಪಳಿಯನ್ನು ನೀಡಲಾಗಿರುತ್ತದೆ. ಆದರೆ, ಅನೇಕ ಪ್ರಯಾಣಿಕರು ಯಾವುದೇ ಸಕಾರಣವಿಲ್ಲದೆ ಇದನ್ನು ಎಳೆಯುವುದು ಕಂಡುಬರುತ್ತದೆ. ಹೀಗೆ ಮಾಡುವುದು ಕಾನೂನು ಪ್ರಕಾರ ಅಪರಾಧ.

ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ಪ್ರಯಾಣಿಕರು ರೈಲು ಪ್ರಯಾಣದ ವೇಳೆ ಕೇವಲ ತುರ್ತು ಸಂದರ್ಭಗಳಲ್ಲಿ ಮಾತ್ರ ಚೈನ್ ಎಳೆಯಬಹುದು. ಉದಾಹರಣೆಗೆ, ವೈದ್ಯಕೀಯ ತುರ್ತು ಪರಿಸ್ಥಿತಿ, ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಾಗ, ದರೋಡೆ ಅಥವಾ ಕಳ್ಳತನದಂತಹ ಘಟನೆಗಳು ನಡೆದಾಗ ಸರಪಳಿ ಎಳೆಯಬಹುದು. ಇದಲ್ಲದೆ, ಮಗು, ಅಂಗವಿಕಲರು ಅಥವಾ ವೃದ್ಧರು ನಿಲ್ದಾಣದಲ್ಲಿ ತಪ್ಪಿ ಹೋದಾಗಲೂ ಚೈನ್ ಎಳೆಯುವ ಅವಕಾಶವಿದೆ. ಆದರೆ, ಬಹಳಷ್ಟು ಜನರು ಯಾವುದೇ ಕಾರಣವಿಲ್ಲದೆ ಚೈನ್ ಎಳೆಯುತ್ತಾರೆ.

ಹೀಗೆ ಅನಗತ್ಯವಾಗಿ ರೈಲಿನ ಚೈನ್ ಎಳೆದರೆ, ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 141 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಕಾಯ್ದೆಯ ಪ್ರಕಾರ, ಚಲಿಸುತ್ತಿರುವ ರೈಲಿನಲ್ಲಿ ಯಾವುದೇ ಸೂಕ್ತ ಕಾರಣವಿಲ್ಲದೆ ಚೈನ್ ಎಳೆದರೆ, ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಇದರೊಂದಿಗೆ, ಒಂದು ಸಾವಿರ ರೂಪಾಯಿಗಳವರೆಗೆ ದಂಡವನ್ನು ವಿಧಿಸುವ ಅವಕಾಶವೂ ಇದೆ. ಕೆಲವು ಪ್ರಕರಣಗಳಲ್ಲಿ, ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸುವ ಸಾಧ್ಯತೆಗಳಿರುತ್ತವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಆದ್ದರಿಂದ, ಪ್ರಯಾಣಿಕರು ರೈಲ್ವೆ ನಿಯಮಗಳನ್ನು ಗೌರವಿಸುವುದು ಮತ್ತು ತುರ್ತು ಸಂದರ್ಭಗಳಲ್ಲಷ್ಟೇ ಚೈನ್ ಎಳೆಯುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಅನಗತ್ಯವಾಗಿ ಚೈನ್ ಎಳೆದು ಕಾನೂನು ಕ್ರಮಕ್ಕೆ ಒಳಗಾಗುವುದನ್ನು ತಪ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read