ಪಡಿತರ ಚೀಟಿದಾರರೇ ಗಮನಿಸಿ: ಕಾರ್ಡ್‌ ರದ್ದಾಗಲು ಕಾರಣವಾಗಬಹುದು ಈ ಸಣ್ಣ ತಪ್ಪು !

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಡವರು ಮತ್ತು ನಿರ್ಗತಿಕರಿಗಾಗಿ ಸರ್ಕಾರ ನೀಡುವ ರೇಷನ್ ಕಾರ್ಡ್ ಒಂದು ಪ್ರಮುಖ ಗುರುತಿನ ಚೀಟಿ ಮತ್ತು ಆಹಾರ ಭದ್ರತೆಯ ಸಾಧನ. ಆದರೆ, ಅನೇಕ ಅರ್ಹ ಫಲಾನುಭವಿಗಳು ಒಂದು ಸಣ್ಣ ಮಿಸ್ಟೇಕ್‌ನಿಂದ ಈ ಸೌಲಭ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ಆ ತಪ್ಪು ಯಾವುದು?

ಸರ್ಕಾರದ ನಿಯಮಗಳ ಪ್ರಕಾರ, ದೀರ್ಘಕಾಲದವರೆಗೆ ಪಡಿತರ ತೆಗೆದುಕೊಳ್ಳದೆ ಇರುವ ರೇಷನ್ ಕಾರ್ಡ್‌ಗಳನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ. ಅಂತಹ ಕಾರ್ಡ್‌ಗಳನ್ನು ರದ್ದುಪಡಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ. ಒಂದು ವೇಳೆ ನೀವು ಕೂಡಾ ಬಹಳ ದಿನಗಳಿಂದ ನಿಮ್ಮ ರೇಷನ್ ಕಾರ್ಡ್‌ನಲ್ಲಿ ಪಡಿತರ ಪಡೆದಿಲ್ಲದಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಇಲ್ಲದಿದ್ದರೆ, ನಿಮ್ಮ ಕಾರ್ಡ್ ಕೂಡ ರದ್ದಾಗಬಹುದು.

ಒಂದು ಬಾರಿ ರೇಷನ್ ಕಾರ್ಡ್ ರದ್ದಾದರೆ, ಮತ್ತೆ ಪಡಿತರ ಸೌಲಭ್ಯ ಪಡೆಯಲು ನೀವು ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳಬಹುದು ಮತ್ತು ಅನಗತ್ಯ ತೊಂದರೆಗೆ ಕಾರಣವಾಗಬಹುದು. ಹೀಗಾಗಿ, ನೀವು ಅರ್ಹರಾಗಿದ್ದು, ಪಡಿತರ ಪಡೆಯುವ ಅಗತ್ಯವಿದ್ದರೆ, ನಿಯಮಿತವಾಗಿ ನಿಮ್ಮ ರೇಷನ್ ಅಂಗಡಿಗೆ ಭೇಟಿ ನೀಡಿ ಪಡಿತರವನ್ನು ಪಡೆದುಕೊಳ್ಳಿ.

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ನಿಮ್ಮ ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಗೆ ಭೇಟಿ ನೀಡಬಹುದು. ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳು ಮತ್ತು ಗುರುತಿನ ಪುರಾವೆಗಳನ್ನು ಸಲ್ಲಿಸುವುದು ಕಡ್ಡಾಯ.

ಸಣ್ಣ ಅಜಾಗರೂಕತೆಯಿಂದ ನಿಮ್ಮ ಹಕ್ಕು ಕಸಿದುಕೊಳ್ಳದಿರಿ. ನಿಮ್ಮ ರೇಷನ್ ಕಾರ್ಡ್ ಅನ್ನು ಸಕ್ರಿಯವಾಗಿರಿಸಿ ಮತ್ತು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read