ಮಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಎಡಿಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಆರ್. ಹಿತೇಂದ್ರ ಅವರು, ನಿನ್ನೆ ತಡರಾತ್ರಿ, ಸುಹಾಸ್ ಶೆಟ್ಟಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಆ ನಂತರ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ನಾವು ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದೆ, ಅಂತ್ಯಕ್ರಿಯೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳೂರಿನ ನಾಗರಿಕರು ಶಾಂತಿ ಕಾಪಾಡುವಂತೆ ನಾವು ವಿನಂತಿಸುತ್ತೇವೆ. ನಾವು ಆರೋಪಿಗಳನ್ನು ಗುರುತಿಸಿದ್ದೇವೆ. ನಮ್ಮ ತಂಡಗಳು ಅವರ ಬಂಧನಕ್ಕೆ ಕ್ರಮಕೈಗೊಂಡಿವೆ ಎಂದು ಹೇಳಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿ, ನಿನ್ನೆ ರಾತ್ರಿ 8.30 ರ ಸುಮಾರಿಗೆ, ಫಾಝಿಲ್ ಕೊಲೆ ಪ್ರಕರಣದ ನಂಬರ್ ಒನ್ ಆರೋಪಿಯಾಗಿರುವ ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು 5-6 ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ನಾವು ಕೊಲೆ ಪ್ರಕರಣ ದಾಖಲಿಸಿದ್ದೇವೆ ಮತ್ತು ಅದರ ಮೇಲೆ ತಂಡಗಳು ಕೆಲಸ ಮಾಡುತ್ತಿವೆ. ಕೊಲೆಯ ಹಿಂದಿನ ಉದ್ದೇಶ ಏನೆಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ನಗರದಲ್ಲಿ ಶಾಂತಿ ಕಾಪಾಡಲು ನಾವು ನಿಷೇಧಾಜ್ಞೆ ವಿಧಿಸಿದ್ದೇವೆ. ಬಜರಂಗದಳ ನಿನ್ನೆ ತಡರಾತ್ರಿ ನಗರ ಬಂದ್ಗೆ ಕರೆ ನೀಡಿತ್ತು. ಕೆಲವು ದುಷ್ಕರ್ಮಿಗಳು ಕೆಲವು ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿದ್ದೇವೆ. ನಗರದಲ್ಲಿ ಸಾಕಷ್ಟು ನಿಯೋಜನೆ ಮಾಡಿದ್ದೇವೆ. ನಮ್ಮ ತಂಡಗಳು ಗಸ್ತು ತಿರುಗುತ್ತಿವೆ ಎಂದು ಹೇಳಿದ್ದಾರೆ.
#WATCH | Karnataka: Mangaluru Police Commissioner Anupam Agrawal says, "Last night at around 8.30 pm, Suhas Shetty, a rowdy sheeter, who is accused number one in Fazil's murder case, was killed by 5-6 unidentified assailants. We have registered a murder case, and teams are… pic.twitter.com/fpi2QeWEm0
— ANI (@ANI) May 2, 2025
#WATCH | Mangaluru, Karnataka: R Hitendra, ADGP (Law & Order) says, " Yesterday late evening, a man named Suhas Shetty was murdered. There was a tense situation in the city after that. We have made suitable arrangements. Post-mortem is underway, cremation arrangements will be… pic.twitter.com/mSCDvl3Yek
— ANI (@ANI) May 2, 2025