ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅಗ್ರೆಸ್ಸಿವ್ ನಾಯಕ ಅಷ್ಟೇ , ಉದ್ದೇಶಪೂರ್ವಕವಾಗಿ ಪೊಲೀಸ್ ಅಧಿಕಾರಿ ಮುಂದೆ ಕೈ ಎತ್ತಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅಗ್ರೆಸ್ಸಿವ್ ನಾಯಕ ಅಷ್ಟೇ , ಉದ್ದೇಶಪೂರ್ವಕವಾಗಿ ಪೊಲೀಸ್ ಅಧಿಕಾರಿ ಮುಂದೆ ಕೈ ಎತ್ತಿಲ್ಲ. ನ್ಯೂನ್ಯತೆ ಕಾರಣಕ್ಕೆ ಸಿಟ್ಟಾಗಿದ್ದರು ಅಷ್ಟೇ. ವಿರೋಧ ಪಕ್ಷಗಳು ಯಾವಾಗಲೂ ಸಿಎಂ ಸಿದ್ದರಾಮಯ್ಯರ ತಪ್ಪು ಹುಡುಕುವ ಕೆಲಸ ಮಾಡುತ್ತದೆ ಎಂದರು.
ಪಹಲ್ಗಾಮ್ ದಾಳಿಯಲ್ಲಿ ಬಲಿಯಾದವರಿಗೆ ಕೇಂದ್ರ ಸರ್ಕಾರ ಪರಿಹಾರದ ಜೊತೆಗೆ ಮೃತರ ಕುಟುಂಬದ ಸದಸ್ಯರಿಗೆ ಜೀವನ ಮಾಡಲು ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
You Might Also Like
			TAGGED:ಸಚಿವ ಚೆಲುವರಾಯಸ್ವಾಮಿ		
		
 
			 
		 
		 
		 
		 Loading ...
 Loading ... 
		 
		