ಬೆಂಗಳೂರು: ಚಾಕುವಿನಿಂದ ಇರಿದು ಮಗನೇ ತಂದೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ.
ವಿವೇಕನಗರದ ಬಸ್ ನಿಲ್ದಾಣದ ಹಿಂಭಾಗ ತಡರಾತ್ರಿ ಈ ಘಟನೆ ನಡೆದಿದೆ. ಮಗನಿಂದಲೇ ನಿವೃತ್ತ ಯೋಧ ಇಸ್ಲಾಂ ಅರಬ್ (47) ಕೊಲೆಯಾಗಿದ್ದಾರೆ. ಬೋಲು ಅರಬ್ ತಂದೆಯನ್ನೇ ಕೊಂದ ಆರೋಪಿ.
ಮನೆಯಲ್ಲಿ ಸ್ಟ್ರಿಕ್ಟ್ ಮಾಡುತ್ತಿದ್ದರು ಎಂಬ ಕಾರಣಕ್ಕೆ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ವಿವೇಕನಗರ ಪೊಲೀಸರು ಆರೋಪಿ ಬೋಲು ಅರಬ್ ನನ್ನು ಬಂಧಿಸಿದ್ದಾರೆ.
ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.