ಅಕ್ಷರ್‌ ಪಟೇಲ್‌ ಪಾದ ಮುಟ್ಟಿ ನಮಸ್ಕರಿಸಿದ ಕೊಹ್ಲಿ ; ತಮಾಷೆ ವಿಡಿಯೋ ವೈರಲ್ | Watch

ಚಾಂಪಿಯನ್ಸ್ ಟ್ರೋಫಿ 2025ರ 12ನೇ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಆದರೆ, ಈ ಗೆಲುವು ಸುಲಭವಾಗಿರಲಿಲ್ಲ. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ತಮ್ಮ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದರು. ಆದರೆ, ಅಕ್ಷರ್ ಪಟೇಲ್ ಅವರ ಚಾಣಾಕ್ಷ ಬೌಲಿಂಗ್‌ನಿಂದ ಕೆ.ಎಲ್. ರಾಹುಲ್ ಸ್ಟಂಪ್ ಔಟ್ ಮಾಡಿದರು.

ವಿಲಿಯಮ್ಸನ್ 120 ಎಸೆತಗಳಲ್ಲಿ 81 ರನ್ ಗಳಿಸಿ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ದಡ ಮುಟ್ಟಿಸುವ ಪ್ರಯತ್ನದಲ್ಲಿದ್ದರು. ಆದರೆ, ಅಕ್ಷರ್ ಪಟೇಲ್ ಅವರ ಮೋಡಿಗಾರಿಕೆ ಅನುಭವಿ ಬ್ಯಾಟರ್ ಅನ್ನು ಪೆವಿಲಿಯನ್‌ಗೆ ಕಳುಹಿಸಿತು. ವಿಲಿಯಮ್ಸನ್ ವಿಕೆಟ್ ಪಡೆದ ಅಕ್ಷರ್ ಪಟೇಲ್ ಅವರ ಬೌಲಿಂಗ್‌ಗೆ ಮೆಚ್ಚುಗೆ ಸೂಚಿಸಿದ ವಿರಾಟ್ ಕೊಹ್ಲಿ, ಅವರ ಪಾದಗಳನ್ನು ಮುಟ್ಟಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದು, ಈ ತಮಾಷೆ ಘಟನೆಯ ವಿಡಿಯೋ ವೈರಲ್‌ ಆಗಿದೆ.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 250 ರನ್‌ಗಳ ಗುರಿ ನೀಡಿತ್ತು. ವಿಲಿಯಮ್ಸನ್ ಔಟಾದ ನಂತರ, ನ್ಯೂಜಿಲೆಂಡ್ ತಂಡವು ಕಳಪೆ ಪ್ರದರ್ಶನ ನೀಡಿತು. ಅಕ್ಷರ್ ಪಟೇಲ್ ನಂತರ, ವರುಣ್ ಚಕ್ರವರ್ತಿ ತಮ್ಮ ಸ್ಪಿನ್ ಮೋಡಿಯಿಂದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಂಗಾಲು ಮಾಡಿದರು. ಚಕ್ರವರ್ತಿ 5 ವಿಕೆಟ್ ಪಡೆದು ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪಂದ್ಯದ ನಂತರ ಮಾತನಾಡಿದ ವರುಣ್ ಚಕ್ರವರ್ತಿ, ಆರಂಭದಲ್ಲಿ ನರ್ವಸ್ ಆಗಿದ್ದೆ, ಆದರೆ ಆಟ ಮುಂದುವರೆದಂತೆ ಉತ್ತಮ ಅನಿಸಿತು. ವಿರಾಟ್, ರೋಹಿತ್, ಶ್ರೇಯಸ್, ಹಾರ್ದಿಕ್ ಎಲ್ಲರೂ ನನ್ನೊಂದಿಗೆ ಮಾತನಾಡಿದರು. ಕುಲ್ದೀಪ್, ಜಡೇಜಾ, ಅಕ್ಷರ್ ಮತ್ತು ವೇಗದ ಬೌಲರ್‌ಗಳು ಸಹ ಉತ್ತಮ ಪ್ರದರ್ಶನ ನೀಡಿದರು. ಇದು ಸಂಪೂರ್ಣ ತಂಡದ ಪ್ರಯತ್ನ ಎಂದು ಹೇಳಿದರು.

ಭಾರತ ತಂಡವು ಮಾರ್ಚ್ 4 ರಂದು ಇದೇ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯ ಆಡಲಿದೆ. ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವು ಮಾರ್ಚ್ 5 ರಂದು ಗಡ್ಡಾಫಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಸೆಮಿಫೈನಲ್ ಪಂದ್ಯ ಆಡಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read