ಕೇರಳ ದೇಗುಲಕ್ಕೆ ʼರೋಬೋಟ್ʼ ಆನೆ; ನಿಜವಾದ ಪ್ರಾಣಿಯಂತೆ ನಿರ್ವಹಿಸುತ್ತೆ ಎಲ್ಲ ಕೆಲಸ | Video

ಕೇರಳದ ದೇಗುಲವೊಂದಕ್ಕೆ ಅದ್ಭುತ ಯಾಂತ್ರಿಕ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಆನೆ ನಿಜವಾದ ಆನೆಯಂತೆಯೇ ಬಹುತೇಕ ಎಲ್ಲ ಕೆಲಸಗಳನ್ನು ಮಾಡಬಲ್ಲದು. ಪ್ರಖ್ಯಾತ ಸಿತಾರ್ ವಾದಕಿ ಅನೌಷ್ಕಾ ಶಂಕರ್, ಸಿತಾರ್ ದಂತಕಥೆ ಪಂಡಿತ್ ರವಿಶಂಕರ್ ಅವರ ಪುತ್ರಿ ಮತ್ತು ಪೇಟಾ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಭಾರತ ಇವರು ಜಂಟಿಯಾಗಿ ಈ ರೋಬೋಟ್ ಆನೆಯನ್ನು ಕೇರಳದ ತ್ರಿಶೂರ್‌ನಲ್ಲಿರುವ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ.

ಏನಿದರ ವಿಶೇಷ ?

ʼಕೊಂಬಾರ ಕಣ್ಣನ್ʼ ಎಂದು ಹೆಸರಿಸಲಾದ ಈ ಆನೆ ತ್ರಿಶೂರ್‌ನ ಕೊಂಬಾರ ಶ್ರೀಕೃಷ್ಣ ಸ್ವಾಮಿ ದೇವಸ್ಥಾನಕ್ಕೆ ಲಭ್ಯವಾಗಿದೆ. ಈ ಯಾಂತ್ರಿಕ ಆನೆ ಕೊಂಬಾರ ಕಣ್ಣನ್ ನಿಜವಾದ ಆನೆಯಂತೆಯೇ ತಲೆ ಅಲ್ಲಾಡಿಸುವುದು, ಕಿವಿ ಮತ್ತು ಕಣ್ಣುಗಳನ್ನು ಚಲಿಸುವುದು, ಬಾಲವನ್ನು ತಿರುಗಿಸುವುದು ಮತ್ತು ಸೊಂಡಿಲನ್ನು ಎತ್ತುವುದು ಮುಂತಾದ ಎಲ್ಲ ಕೆಲಸಗಳನ್ನು ಮಾಡಬಲ್ಲದು. ಅಲ್ಲದೆ, ಈ ರೋಬೋಟ್ ಆನೆ ನೀರನ್ನು ಸಹ ಚಿಮ್ಮಬಲ್ಲದು.

ಈ ಯಾಂತ್ರಿಕ ಆನೆಯ ಮೇಲೆ ಸವಾರಿ ಮಾಡಬಹುದು ಮತ್ತು ಯಾವುದೇ ತೊಂದರೆಯಿಲ್ಲದೆ ಧಾರ್ಮಿಕ ವಿಧಿಗಳು ಮತ್ತು ಮೆರವಣಿಗೆಗಳಲ್ಲಿ ಬಳಸಬಹುದು. ಇದನ್ನು ಸುಲಭವಾಗಿ ಪ್ಲಗ್ ಇನ್ ಮಾಡುವ ಮೂಲಕ ಕಾರ್ಯನಿರ್ವಹಿಸಬಹುದು. ಅಗತ್ಯವಿದ್ದಾಗ ಈ ಆನೆಯನ್ನು ಚಕ್ರಗಳ ಮೇಲೆ ಜೋಡಿಸಿ ನಡೆಯುವಂತೆ ಮಾಡಬಹುದು. ರಬ್ಬರ್, ಫೈಬರ್, ಲೋಹ, ಜಾಲರಿ, ಫೋಮ್ ಮತ್ತು ಸ್ಟೀಲ್‌ನಿಂದ ನಿರ್ಮಿಸಲಾದ ಈ ಯಾಂತ್ರಿಕ ಆನೆ ಐದು ಮೋಟಾರ್‌ಗಳಲ್ಲಿ ಚಲಿಸುತ್ತದೆ ಮತ್ತು ನೈಜ ಆನೆಯ ಚಲನೆಗಳನ್ನು ಅನುಕರಿಸುತ್ತದೆ.

ಈ ದೇಣಿಗೆಯಿಂದ ದೇವಸ್ಥಾನವು ನಿಜವಾದ ಆನೆಗಳ ಅಗತ್ಯವಿಲ್ಲದೆ ತನ್ನ ಸಮಾರಂಭಗಳನ್ನು ನಡೆಸಲು ಸಾಧ್ಯವಾಗುತ್ತದೆ. ನಿಜವಾದ ಆನೆಗಳನ್ನು ಯಾಂತ್ರಿಕ ಆನೆಗಳಿಂದ ಬದಲಾಯಿಸುವುದರಿಂದ, ಆನೆಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿರಲು ಸಾಧ್ಯವಾಗುತ್ತದೆ ಮತ್ತು ಸೆರೆವಾಸ, ಸರಪಳಿಗಳು ಮತ್ತು ದುರ್ಬಳಕೆಯಿಂದ ಅವುಗಳನ್ನು ರಕ್ಷಿಸಬಹುದು ಎಂದು ಪೇಟಾ ಹೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read