alex Certify ನರ್ತಕಿಗೆ ಹಣ ಎಸೆದ ಮಗ ; ತಂದೆಯಿಂದ ಭರ್ಜರಿ ಥಳಿತ | Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರ್ತಕಿಗೆ ಹಣ ಎಸೆದ ಮಗ ; ತಂದೆಯಿಂದ ಭರ್ಜರಿ ಥಳಿತ | Watch Video

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ವೇದಿಕೆ ನರ್ತಕಿಗೆ ಹಣ ಎಸೆದ ಮಗನನ್ನು ತಂದೆಯೊಬ್ಬರು ಹಿಡಿದು ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ. ಹಬ್ಬದ ಸಂದರ್ಭದಲ್ಲಿ ಸಾಂಸ್ಕೃತಿಕ ಮತ್ತು ವೇದಿಕೆ ಪ್ರದರ್ಶನಗಳು ಸಾಮಾನ್ಯವಾದ ಗ್ರಾಮೀಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ವೇದಿಕೆಯ ಬಳಿ ನಿಂತಿದ್ದ ಯುವಕನೊಬ್ಬ ವೇದಿಕೆ ನೃತ್ಯಗಾರ್ತಿಗೆ ಹಣವನ್ನು ಎಸೆಯುವುದನ್ನು ವಿಡಿಯೊದಲ್ಲಿ ಕಾಣಬಹುದು. ಇನ್ನಷ್ಟು ಹಣವನ್ನು ಎಸೆಯಲು ಮುಂದಾಗುತ್ತಿದ್ದಂತೆ, ಕೋಪಗೊಂಡ ತಂದೆ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದು ದಪ್ಪವಾದ ಮರದ ಕೋಲಿನಿಂದ ಮಗನನ್ನು ಮನಬಂದಂತೆ ಥಳಿಸಿದ್ದಾರೆ.

ವೇದಿಕೆ ಪ್ರದರ್ಶನದಿಂದ ಮನರಂಜನೆ ಪಡೆಯುತ್ತಿದ್ದ ಜನ ತಂದೆಯ ಕೋಪವನ್ನು ಕಂಡು ಶಾಕ್ ಆಗಿದ್ದಾರೆ. ತಂದೆ, ಮಗನನ್ನು ಹೊಡೆಯುತ್ತಾ ಹಣವನ್ನು ವ್ಯರ್ಥ ಮಾಡಿದ್ದಕ್ಕೆ ಬೈಯುತ್ತಿದ್ದರು. ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೆ, ಮತ್ತೆ ಕೆಲವರು ಈ ಘಟನೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಈ ವಿಡಿಯೋ ಆನ್‌ಲೈನ್‌ನಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ಈ ಘಟನೆಯನ್ನು ಹಾಸ್ಯಾಸ್ಪದವೆಂದು ಕಂಡುಕೊಂಡರೆ, ಇನ್ನು ಕೆಲವರು ತಂದೆಯ ಪರವಾಗಿದ್ದಾರೆ. ವೇದಿಕೆ ಪ್ರದರ್ಶನಗಳಿಗೆ ಹಣವನ್ನು ವ್ಯರ್ಥ ಮಾಡುವುದು ಅನಗತ್ಯ ದುಂದುವೆಚ್ಚ ಎಂದು ವಾದಿಸಿದ್ದಾರೆ. ಆದರೆ, ಇನ್ನೂ ಕೆಲವರು ಸಾರ್ವಜನಿಕವಾಗಿ ಹೊಡೆಯುವುದನ್ನು ಟೀಕಿಸಿದ್ದಾರೆ. ಶಿಸ್ತು ಕಲಿಸಲು ಹಿಂಸೆ ಸರಿಯಾದ ಮಾರ್ಗವಲ್ಲ ಎಂದು ವಾದಿಸಿದ್ದಾರೆ. ಸಾಂಸ್ಕೃತಿಕ ಮೌಲ್ಯಗಳು, ಪೋಷಕರ ಶೈಲಿಗಳು ಮತ್ತು ಆರ್ಥಿಕ ಜವಾಬ್ದಾರಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇತ್ತೀಚಿನ ತಿಂಗಳುಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ಶಿಕ್ಷಿಸುವ ಹಲವಾರು ವಿಡಿಯೋಗಳು ಹರಿದಾಡಿವೆ. ಅತಿಯಾದ ಖರ್ಚು, ಪಾರ್ಟಿ ಮಾಡುವುದು ಮತ್ತು ಕೆಲಸಕ್ಕೆ ಹೋಗದಿರುವುದು ಮುಂತಾದ ಕಾರಣಗಳಿಗಾಗಿ ಮಕ್ಕಳನ್ನು ಶಿಕ್ಷಿಸುತ್ತಿದ್ದಾರೆ. ಶಿಸ್ತು ಅತ್ಯಗತ್ಯವಾದರೂ, ಅದನ್ನು ಕೌಟುಂಬಿಕ ಗಡಿಗಳೊಳಗೆ ನಿರ್ವಹಿಸಬೇಕು. ಸಾರ್ವಜನಿಕ ಪ್ರದರ್ಶನವಾಗಿ ಪರಿವರ್ತಿಸಬಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...