ಪ್ರಯಾಣಿಕರ ದಾಹ ತಣಿಸಲು BMTC ಸಿಬ್ಬಂದಿಯಿಂದ ಉಚಿತ ಮಜ್ಜಿಗೆ ಸೇವೆ….!

ಬಿಸಿಲಿನ ತಾಪದಿಂದ ಬಳಲುತ್ತಿರುವ ಪ್ರಯಾಣಿಕರಿಗೆ, ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ತಂಪು ನೀಡುವ ವಿನೂತನ ಕಾರ್ಯಕ್ರಮವೊಂದು ಬೆಂಗಳೂರಿನ ರಾಜಾಜಿನಗರದ BMTC ಡಿಪೋ 21ರಲ್ಲಿ ನಡೆಯುತ್ತಿದೆ. ಇಲ್ಲಿನ ಸಿಬ್ಬಂದಿ, ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿದಿನ 25 ಲೀಟರ್ ಮಜ್ಜಿಗೆಯನ್ನು ತಯಾರಿಸಿ, ಉಚಿತವಾಗಿ ವಿತರಿಸುತ್ತಿದ್ದಾರೆ.

ಈ ಮಜ್ಜಿಗೆಯನ್ನು ಶುದ್ಧ RO ನೀರಿನಿಂದ ತಯಾರಿಸಲಾಗುತ್ತಿದ್ದು, ಪ್ರತಿದಿನ ಮಧ್ಯಾಹ್ನ 11.30 ರಿಂದ 2.30 ರವರೆಗೆ ವಿತರಿಸಲಾಗುತ್ತದೆ. ಕಳೆದ ವರ್ಷ ಆರಂಭವಾದ ಈ ಕಾರ್ಯಕ್ರಮವನ್ನು ಈ ಬಾರಿ ಇಡೀ ಬೇಸಿಗೆಯಲ್ಲಿ ಮುಂದುವರೆಸಲಾಗುತ್ತಿದೆ.

ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಿಸಿಲಿನ ತಾಪಕ್ಕೆ ತಂಪು ನೀಡುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.

ಸಿಬ್ಬಂದಿಯ ಈ ಕಾರ್ಯಕ್ಕೆ ಕೆಲವೊಮ್ಮೆ CSR ನಿಧಿಗಳಿಂದಲೂ ಸಹಾಯ ದೊರೆಯುತ್ತದೆ. ಮಜ್ಜಿಗೆ ವಿತರಿಸುವ ಸ್ಥಳದಲ್ಲಿ LED ಪರದೆಯೊಂದನ್ನು ಅಳವಡಿಸಲಾಗಿದ್ದು, ಅಂದಿನ ಮಜ್ಜಿಗೆ ವಿತರಣೆಗೆ ಯಾರು ಪ್ರಾಯೋಜಕರು ಎಂದು ಅಲ್ಲಿ ಪ್ರದರ್ಶಿಸಲಾಗುತ್ತದೆ. ತಮ್ಮ ಹುಟ್ಟುಹಬ್ಬ ಅಥವಾ ವಿಶೇಷ ದಿನಗಳಲ್ಲಿ ಸಿಬ್ಬಂದಿಯ ಒಬ್ಬೊಬ್ಬ ಸದಸ್ಯರು ಒಂದೊಂದು ದಿನದ ಮಜ್ಜಿಗೆಯ ಸಂಪೂರ್ಣ ಖರ್ಚನ್ನು ಭರಿಸುತ್ತಾರೆ.

ಈ ಮಜ್ಜಿಗೆ ವಿತರಣೆಯು ಬಸ್ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರಿಗೆ ಮಾತ್ರವಲ್ಲದೆ, ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ವೃದ್ಧರಿಗೂ ಸಹ ತಂಪು ನೀಡುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read