ಹೈದರಾಬಾದ್: ಹೈದರಾಬಾದ್ನ ಟಪ್ಪಾಚಬೂತ್ರ ಪ್ರದೇಶದ ಹನುಮಾನ್ ದೇವಸ್ಥಾನದಲ್ಲಿ ಮಾಂಸದ ತುಂಡು ಪತ್ತೆಯಾದ ನಂತರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ನಗರ ಪೊಲೀಸರು ನಡೆಸಿದ ತ್ವರಿತ ತನಿಖೆಯಿಂದ ಬೆಕ್ಕೊಂದು ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ, ಇದು ಸಂಚಿನ ಆತಂಕಗಳನ್ನು ದೂರ ಮಾಡಿದೆ.
ಬುಧವಾರ ಬೆಳಿಗ್ಗೆ, ಮದೀನಾ ಹೋಟೆಲ್ ಬಳಿಯ ಸಂಕಟ ವಿಮೋಚನ ಹನುಮಾನ್ ದೇವಸ್ಥಾನದಲ್ಲಿ ಶಿವಲಿಂಗದ ಬಳಿ 250 ಗ್ರಾಂ ತೂಕದ ಮಾಂಸದ ತುಂಡನ್ನು ದೇವಾಲಯದ ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ವಿಷಯವು ತಕ್ಷಣವೇ ಹರಡಿ ಮತ್ತು ಸ್ಥಳೀಯರ ಗುಂಪು ಸೇರಲು ಕಾರಣವಾಯಿತು.
ಬಿಜೆಪಿ ಮತ್ತು ಬಲಪಂಥೀಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತ್ತು. ಕ್ರಮ ಕೈಗೊಳ್ಳುವಂತೆ ಮತ್ತು ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಲಾಯಿತ್ತು, ಶಾಂತಿ ಕಾಪಾಡಲು ದೊಡ್ಡ ಪೊಲೀಸ್ ನಿಯೋಜಿಸಿದ್ದು, ಪ್ರತಿಭಟನೆಗಳಿಂದಾಗಿ ಸುತ್ತಮುತ್ತಲಿನ ಅಂಗಡಿಗಳು ಸಹ ಮುಚ್ಚಲ್ಪಟ್ಟಿದ್ದವು.
ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ವಿಕ್ರಮ್ ಸಿಂಗ್ ಮನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿ, ದೇವಾಲಯದೊಳಗೆ ಸಿಸಿ ಟಿವಿ ಕ್ಯಾಮೆರಾಗಳಿಲ್ಲ ಎಂದು ಮನ್ ಖಚಿತಪಡಿಸಿದರು, ಆದರೆ ಸುತ್ತಮುತ್ತಲಿನ ಪ್ರದೇಶಗಳ ದೃಶ್ಯಾವಳಿಗಳನ್ನು ವಿಶ್ಲೇಷಿಸಲು ನಾಲ್ಕು ತಂಡಗಳನ್ನು ತಕ್ಷಣವೇ ನಿಯೋಜಿಸಲಾಗಿದೆ ಎಂದು ತಿಳಿಸಿದ್ದರು.
ಸಿಸಿ ಟಿವಿ ದೃಶ್ಯಾವಳಿಯಿಂದ ಸತ್ಯ ಬಹಿರಂಗ
ತನಿಖೆಯು ಫಲಪ್ರದವಾಗಿದ್ದು, ದೇವಾಲಯದ ಉತ್ತರ ಭಾಗದಲ್ಲಿರುವ ಕ್ಯಾಮೆರಾದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಬೆಕ್ಕೊಂದು ಬಾಯಿಯಲ್ಲಿ ಮಾಂಸದ ತುಂಡನ್ನು ಕಚ್ಚಿಕೊಂಡು ದೇವಾಲಯದ ಆವರಣವನ್ನು ಪ್ರವೇಶಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ದೃಶ್ಯಾವಳಿಯು ಬೆಕ್ಕು ಮಾಂಸವನ್ನು ಶಿವಲಿಂಗದ ಹಿಂದೆ ಇರಿಸುತ್ತಿರುವುದನ್ನು ತೋರಿಸುತ್ತದೆ. ಈ ಸಾಕ್ಷ್ಯವು ಘಟನೆಗೆ ಬೆಕ್ಕು ಕಾರಣ ಎಂದು ನಿರ್ಣಾಯಕವಾಗಿ ಸಾಬೀತುಪಡಿಸುತ್ತದೆ.
ಈ ಘಟನೆಯ ಬಗ್ಗೆ ವದಂತಿಗಳು ಅಥವಾ ತಪ್ಪು ಮಾಹಿತಿಯನ್ನು ಹರಡದಂತೆ ಹೈದರಾಬಾದ್ ಪೊಲೀಸರು ನಾಗರಿಕರನ್ನು ಕೋರಿದ್ದಾರೆ. ದಕ್ಷಿಣ ಪಶ್ಚಿಮ ವಲಯದ ಉಪ ಪೊಲೀಸ್ ಆಯುಕ್ತರು, “ಈ ವಿಷಯವನ್ನು ಕಡಿಮೆ ಅವಧಿಯಲ್ಲಿ ಪತ್ತೆಹಚ್ಚುವಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳ ಕ್ಷಿಪ್ರ ಮತ್ತು ಪರಿಣಾಮಕಾರಿ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ” ಎಂದು ಹೇಳಿದರು.
Pls see the video and listen to Sri G. Chandra Mohan, DCP South West Zone clearly presenting the facts regarding the incident at a temple in Tappachabutra PS limits.
We urge everyone to refrain from spreading misinformation and not to use social media to provoke disharmony… https://t.co/bdUykLjHAD pic.twitter.com/qbLpd81TUJ
— Hyderabad City Police (@hydcitypolice) February 12, 2025
I appeal all citizens to not spread rumours & to cooperate for maintaining Communal harmony@hydcitypolice @TelanganaCOPs @MaheshBhagwat95 @CVAnandIPS @Mouzam_Ali_ pic.twitter.com/hvYzwffrxC
— G CHANDRA MOHAN (నైఋతి మండల డీసీపీ ساؤتھ ویسٹ ڈی) (@DCP_SWZ) February 12, 2025