alex Certify ಪಿಜಿ ಆಯುಷ್ ಕೋರ್ಸ್ ಪ್ರವೇಶ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಅ. 28 ರಿಂದ ದಾಖಲೆ ಪರಿಶೀಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಜಿ ಆಯುಷ್ ಕೋರ್ಸ್ ಪ್ರವೇಶ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಅ. 28 ರಿಂದ ದಾಖಲೆ ಪರಿಶೀಲನೆ

PGAYUSH- 24 ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅ.28ರಿಂದ 30ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ.

BNYS ನ ಎಲ್ಲ rankನ ಅಭ್ಯರ್ಥಿಗಳಿಗೆ ಅ.30ರಂದು ಮಧ್ಯಾಹ್ನ 12:30ರಿಂದ 3ರವರೆಗೆ ದಾಖಲಾತಿಗಳನ್ನು ಪರಿಶೀಲಿಸಲಾಗುವುದು.

AIAPGET-2024 ನಲ್ಲಿ ಅರ್ಹತೆಯನ್ನು ಪಡೆದ ಮಾತ್ರಕ್ಕೆ, ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದಲ್ಲಿ / ನಿಗದಿತ ಪ್ರಮಾಣ ಪತ್ರಗಳನ್ನು ದಾಖಲಾತಿ ಪರಿಶೀಲನೆಗೆ ಹಾಜರು ಪಡಿಸದಿದ್ದಲ್ಲಿ ಅಭ್ಯರ್ಥಿಯು ಪ್ರವೇಶಾತಿಗಾಗಿ ಯಾವುದೇ ಹಕ್ಕನ್ನು ಹೊಂದುವುದಿಲ್ಲ. ಮುಂದುವರಿದು, ನೊಂದಣಿ ಮಾಡಿಕೊಂಡು ದಾಖಲಾತಿ ಪರೀಶೀಲನೆಯನ್ನು ಯಶಸ್ವಿಯಾಗಿ ಪೂರೈಸುವ ಅಭ್ಯರ್ಥಿಗಳು ಮಾತ್ರ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ.

ದಾಖಲೆಗಳ ಪರಿಶೀಲನೆಗಾಗಿ ಕೇಂದ್ರಕ್ಕೆ ಬರುವ ಸಮಯದಲ್ಲಿ ಕಡ್ಡಾಯವಾಗಿ. ಎಲ್ಲಾ ಮೂಲ ದಾಖಲೆಗಳನ್ನು ಮತ್ತು ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ಹಾಜರುಪಡಿಸಬೇಕು.

ಅಭ್ಯರ್ಥಿಗಳು, ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಗೊತ್ತುಪಡಿಸಿರುವ ವೇಳಾಪಟ್ಟಿ ಪ್ರಕಾರ ಖುದ್ದಾಗಿ ಹಾಜರಿರಬೇಕು. ಅಂದರೆ, ಅವರ ಪರವಾಗಿ ಬೇರೆ ಯಾರೂ ಹಾಜರಾಗುವಂತಿಲ್ಲ ಅಥವಾ ಅವರ ಪರವಾಗಿ ಬಂದಿರುವ ಯಾರೇ ಪ್ರತಿನಿಧಿಗಳಿಗೆ ಹಾಜರಾಗಲು ಅವಕಾಶ ನೀಡುವುದಿಲ್ಲ.

ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಬರುವ ಸಮಯದಲ್ಲಿ, ತಾವು ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಮೀಸಲಾತಿ / ಯಾವುದೇ ಕ್ಷೇಮುಗಳಿಗೆ ಪೂರಕವಾದ ಎಲ್ಲಾ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು.

ಸೂಚನೆಗಳು

AIAPGET-2024 ರಲ್ಲಿ ಅರ್ಹತೆ ಪಡೆದರೆ, ಅಭ್ಯರ್ಥಿಯು ಅರ್ಹತಾ ಷರತ್ತುಗಳನ್ನು ಪೂರೈಸದ ಹೊರತು / ದಾಖಲೆಗಳು / ಪ್ರಮಾಣಪತ್ರಗಳನ್ನು ಸಲ್ಲಿಸದ ಹೊರತು ಪ್ರವೇಶಕ್ಕಾಗಿ ಅಭ್ಯರ್ಥಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ. ಇದಲ್ಲದೆ, ದಾಖಲೆ ಪರಿಶೀಲನೆ ಸೇರಿದಂತೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಮಾತ್ರ ಕರ್ನಾಟಕದಲ್ಲಿ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳು ಕಡ್ಡಾಯವಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ಮೂಲದಲ್ಲಿ ಹಾಜರುಪಡಿಸಬೇಕು

ಎಲ್ಲಾ ಮೂಲ ದಾಖಲೆಗಳ ಎರಡು ಸೆಟ್ ಫೋಟೋಕಾಪಿಗಳು.

ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಲು ವೇಳಾಪಟ್ಟಿಯ ಪ್ರಕಾರ ಅಭ್ಯರ್ಥಿಗಳು ವೈಯಕ್ತಿಕವಾಗಿ ಹಾಜರಿರಬೇಕು ಮತ್ತು ಯಾರೂ ಅವರನ್ನು ಪ್ರತಿನಿಧಿಸುವಂತಿಲ್ಲ.

ಅಭ್ಯರ್ಥಿಯು ತಮ್ಮ ಆನ್‌ಲೈನ್ ಅರ್ಜಿಯಲ್ಲಿ ಮಾಡಿದ ಹಕ್ಕು / ಮೀಸಲಾತಿಯನ್ನು ಬೆಂಬಲಿಸಲು ಎಲ್ಲಾ ಅಗತ್ಯ ಮೂಲ ದಾಖಲೆಗಳನ್ನು ತಮ್ಮೊಂದಿಗೆ ತರಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...