alex Certify ರಸ್ತೆಯಲ್ಲಿ ಉಗುಳುವುದನ್ನು ತಡೆಯಲು ಈ ಐಡಿಯಾ ಕೊಟ್ಟ ನಿತಿನ್ ಗಡ್ಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ಉಗುಳುವುದನ್ನು ತಡೆಯಲು ಈ ಐಡಿಯಾ ಕೊಟ್ಟ ನಿತಿನ್ ಗಡ್ಕರಿ

ಪಾನ್ ಮಸಾಲ, ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳುವವರನ್ನು ತಡೆಯಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶಿಷ್ಟ ಉಪಾಯವೊಂದನ್ನು ನೀಡಿದ್ದಾರೆ.

ಪಾನ್, ಮಸಾಲಾ, ಗುಟ್ಕಾ ಸೇವಿಸಿ ರಸ್ತೆಯಲ್ಲಿ ಉಗುಳುವವರ ಫೋಟೋ ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ಅವರು ಹೇಳಿದ್ದಾರೆ.

ಗಾಂಧಿ ಜಯಂತಿಯಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ಸ್ವಚ್ಛ ಭಾರತ್ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ನಮ್ಮ ದೇಶದ ಜನ ತುಂಬಾ ಬುದ್ಧಿವಂತರು, ಚಾಕಲೇಟ್ ತಿಂದು ರ್ಯಾಪರ್ ಗಳನ್ನು ರಸ್ತೆಗೆ ಎಸೆಯುತ್ತಾರೆ. ಅದೇ ವ್ಯಕ್ತಿ ವಿದೇಶಕ್ಕೆ ಹೋದಾಗ ಜೇಬಿನಲ್ಲಿ ಚಾಕಲೇಟ್ ರ್ಯಾಪರ್ ಇಟ್ಟುಕೊಂಡು ವಿದೇಶದಲ್ಲಿ ಚೆನ್ನಾಗಿದೆ ಎಂದು ವರ್ತಿಸುತ್ತಾರೆ. ಇಲ್ಲಿ ಮಾತ್ರ ರ್ಯಾಪರ್ ರಸ್ತೆಗೆ ಎಸೆಯುತ್ತಾರೆ ಎಂದು ಹೇಳಿದ್ದಾರೆ.

ನಾನು ಅದನ್ನೇ ಮಾಡುತ್ತಿದ್ದೆ. ಆದರೆ ಈಗ ಬದಲಾದೆ. ನನಗೂ ಮೊದಲು ಚಾಕೋಲೇಟ್ ತಿಂದ ನಂತರ ರ್ಯಾಪರ್ ಹೊರ ಹಾಕುವ ಅಭ್ಯಾಸ ಇತ್ತು. ಈಗ ಚಾಕೊಲೇಟ್ ತಿಂದಾಗಲೆಲ್ಲ ಮನೆ ತಲುಪಿದ ನಂತರ ರ್ಯಾಪರ್ ಬಿಸಾಡುತ್ತೇನೆ ಎಂದು ತಮ್ಮದೇ ಉದಾಹರಣೆಯನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...