alex Certify BREAKING: ತಿರುಪತಿ ಲಡ್ಡೂ ವಿವಾದ: ಪ್ರಾಯಶ್ಚಿತ್ತಕ್ಕಾಗಿ 11 ದಿನಗಳ ವ್ರತ ಕೈಗೊಂಡ ಡಿಸಿಎಂ ಪವನ್ ಕಲ್ಯಾಣ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ತಿರುಪತಿ ಲಡ್ಡೂ ವಿವಾದ: ಪ್ರಾಯಶ್ಚಿತ್ತಕ್ಕಾಗಿ 11 ದಿನಗಳ ವ್ರತ ಕೈಗೊಂಡ ಡಿಸಿಎಂ ಪವನ್ ಕಲ್ಯಾಣ್

ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ಲಡ್ಡೂ ಪ್ರಸಾದದಲ್ಲಿ ‘ಪ್ರಾಣಿಗಳ ಕೊಬ್ಬಿನ’ ಕಲಬೆರಕೆ ಆರೋಪದ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಮಾಡಲು 11 ದಿನಗಳ ತಪಸ್ಸು ಕೈಗೊಳ್ಳುವುದಾಗಿ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ.

ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ 11 ದಿನಗಳ ಶಾಸ್ತ್ರೋಕ್ತ ತಪಸ್ಸು ಆರಂಭಿಸುವುದಾಗಿ ನಟ ಕಮ್ ರಾಜಕಾರಣಿ ಹೇಳಿದ್ದಾರೆ.

’11 ದಿನಗಳ ಕಾಲ ಪ್ರಾಯಶ್ಚಿತ್ತ ದೀಕ್ಷೆ’

ಕಲ್ಯಾಣ್ ಅವರು ಲಡ್ಡು ಕಲಬೆರಕೆ ವಿಷಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ, ತಿರುಮಲ ದೇವಸ್ಥಾನದಲ್ಲಿ ಪವಿತ್ರ ಕೊಡುಗೆಯಾಗಿರುವ ಲಡ್ಡೂ ಪ್ರಸಾದದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಹೇಳಿದ ಅವರು, ಹಿಂದಿನ ಆಡಳಿತದವರ ನೀಚ ಧೋರಣೆಯಿಂದ ಪವಿತ್ರವಾದ ತಿರುಮಲ ಲಡ್ಡು ಪ್ರಸಾದವು ಅಶುದ್ಧವಾಗಿದೆ, ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದೂ ಜನಾಂಗಕ್ಕೆ ಕಳಂಕವಾಗಿದೆ ಎಂದು ಅವರು ಹೇಳಿದ್ದಾರೆ.

ಲಡ್ಡೂ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂದು ತಿಳಿದ ಕ್ಷಣವೇ ನನ್ನ ಮನಸ್ಸು ಒಡೆದು ಹೋಗಿತ್ತು. ಜನರ ಹಿತಕ್ಕಾಗಿ ಹೋರಾಡುತ್ತಿರುವ ನಾನು ಈ ವಿಚಾರ ಆರಂಭದಲ್ಲೇ ನನ್ನ ಗಮನಕ್ಕೆ ಬಾರದೆ ಇರುವುದು ನೋವು ತಂದಿದೆ. ಕಲಿಯುಗದ ದೇವರಾದ ಬಾಲಾಜಿಗೆ ಮಾಡಿದ ಈ ಘೋರ ಅನ್ಯಾಯಕ್ಕೆ ಸನಾತನ ಧರ್ಮವು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ಅದರ ಭಾಗವಾಗಿ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಪವನ್ ಕಲ್ಯಾಣ್

11 ದಿನಗಳ ತಪಸ್ಸು ಕೈಗೊಂಡ ನಂತರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಲಿದ್ದೇನೆ. ಹನ್ನೊಂದು ದಿನಗಳ ಪ್ರಾಯಶ್ಚಿತ್ತ ದೀಕ್ಷೆಯ ಕೊನೆಯ ಭಾಗದಲ್ಲಿ, ಅಕ್ಟೋಬರ್ 1 ಮತ್ತು 2 ರಂದು, ನಾನು ತಿರುಪತಿಗೆ ಹೋಗಿ ಭಗವಂತನ ವೈಯಕ್ತಿಕ ದರ್ಶನ ಪಡೆದು ಕ್ಷಮೆ ಯಾಚಿಸಿ ನಂತರ ಭಗವಂತನ ಮುಂದೆ ನನ್ನ ಪ್ರಾಯಶ್ಚಿತ್ತ ದೀಕ್ಷೆಯನ್ನು ಪೂರ್ಣಗೊಳಿಸುತ್ತೇನೆ ಎಂದು ತಿಳಿಸಿದ್ದಾರೆ.

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ಮಾಡಿದ ಆಪಾದಿತ ಪಾಪಗಳನ್ನು ರದ್ದುಗೊಳಿಸಲು ಧಾರ್ಮಿಕ ಶುದ್ಧೀಕರಣವನ್ನು ಮಾಡುವ ಅಧಿಕಾರವನ್ನು ನೀಡುವಂತೆ ಅವರು ದೇವತೆಗೆ ಮನವಿ ಮಾಡಿದರು. ಲಡ್ಡೂ ಪ್ರಸಾದದಲ್ಲಿ ಪ್ರಾಣಿಗಳ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದಾಗ ಎದೆಗುಂದಿದೆ ಎಂದು ತಿಳಿಸಿದ್ದಾರೆ.

ಇಂತಹ ಅಕ್ರಮಗಳ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನದ(ಟಿಟಿಡಿ) ನೌಕರರು ಮತ್ತು ಮಂಡಳಿಯ ಸದಸ್ಯರು ಹೇಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಂ ವ್ಯವಸ್ಥೆಯ ಅಂಗವಾಗಿರುವ ಆಡಳಿತ ಮಂಡಳಿಯ ಸದಸ್ಯರು, ನೌಕರರೂ ಈ ತಪ್ಪುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಅಥವಾ ಗೊತ್ತಿದ್ದರೂ ಮಾತನಾಡುವುದಿಲ್ಲ ಎಂಬುದು ನನ್ನ ನೋವು. ಇದಕ್ಕೆ ಆ ಕಾಲದ ರಾಕ್ಷಸ ಆಡಳಿತಗಾರರು ಕಾರಣ ಎಂದು ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...