alex Certify ಬೆಚ್ಚಿ ಬೀಳಿಸುವಂತಿದೆ ಕದ್ದು ಮುಚ್ಚಿ ಭೇಟಿಯಾಗಿ ಸಿಕ್ಕಿಬಿದ್ದ ಪ್ರೇಮಿಗಳಿಗೆ ಕೊಟ್ಟ ‘ಶಿಕ್ಷೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುವಂತಿದೆ ಕದ್ದು ಮುಚ್ಚಿ ಭೇಟಿಯಾಗಿ ಸಿಕ್ಕಿಬಿದ್ದ ಪ್ರೇಮಿಗಳಿಗೆ ಕೊಟ್ಟ ‘ಶಿಕ್ಷೆ’

ಉತ್ತರ ಪ್ರದೇಶದ ಕುಶಿನಗರದಲ್ಲಿ ತಾಲಿಬಾನಿ ಶೈಲಿಯಲ್ಲಿ ಪ್ರೇಮಿಗಳಿಗೆ ಶಿಕ್ಷೆ ನೀಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಸ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಪರಸ್ಖಾಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಾತ್ರಿ ವೇಳೆ ಪ್ರೇಮಿಗಳು ಒಬ್ಬರನ್ನೊಬ್ಬರು ಭೇಟಿಯಾಗಲು ಬಂದಿದ್ದು, ಇವರನ್ನು ಕಂಡ ಕೆಲವರು ಹಲ್ಲೆ ನಡೆಸಿದ್ದಾರೆ. ಬಿಟ್ಟುಬಿಡುವಂತೆ ಪ್ರೇಮಿಗಳು ಕೇಳಿಕೊಂಡರೂ ಕರುಣೆ ತೋರದೇ ಥಳಿಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರು ಸ್ಥಳಕ್ಕಾಗಮಿಸಿದಾಗ ಅವರಿಗೆ ಸಹಾಯ ಮಾಡುವ ಬದಲು ಘಟನೆಯ ವಿಡಿಯೋ ಮಾಡಲು ಆರಂಭಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಘಟನೆಯ ಪ್ರಕಾರ ಹುಡುಗಿಯ ಕುಟುಂಬ ಸದಸ್ಯರು ಪ್ರೇಮಿಗಳನ್ನು ಹಿಡಿದು ಕ್ರೂರವಾಗಿ ಶಿಕ್ಷಿಸಿದ್ದಾರೆ. ಹುಡುಗಿಯ ಚಿಕ್ಕಪ್ಪ ಮತ್ತು ಸಹೋದರ ಇಬ್ಬರನ್ನೂ ಕಂಬಕ್ಕೆ ಕಟ್ಟಿ ಕೆಟ್ಟದಾಗಿ ಥಳಿಸಿದ್ದಾರೆ. ಈ ವೇಳೆ ಪ್ರೇಮಿಗಳು ಪದೇ ಪದೇ ಜನರಲ್ಲಿ ಕ್ಷಮೆ ಯಾಚಿಸಿದರೂ ಯಾರೂ ಕಿವಿಗೊಡಲಿಲ್ಲ. ಅಷ್ಟೇ ಅಲ್ಲದೇ ಹುಡುಗಿಯ ತಲೆಗೂದಲನ್ನೂ ಕತ್ತರಿಸಲಾಗಿದೆ. ಈ ದುಷ್ಕೃತ್ಯದ ನಡುವೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ಅನುಮಾನ ಮೂಡಿದೆ. ಪೊಲೀಸರು ಪ್ರೇಮಿಗಳಿಗೆ ಸಹಾಯ ಮಾಡುವ ಮೊದಲು ಅವರ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಸಕಾಲದಲ್ಲಿ ಮಧ್ಯಪ್ರವೇಶಿಸದ ಕಾರಣ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಜನರು ಆರೋಪಿಸಿದ್ದಾರೆ.

ಪೊಲೀಸರ ಈ ವರ್ತನೆ ಸ್ಥಳೀಯ ಜನರಲ್ಲಿ ಆಕ್ರೋಶವನ್ನು ಹೆಚ್ಚಿಸಿದ್ದು, ಈ ಘಟನೆಯು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಮಯಕ್ಕೆ ಸರಿಯಾಗಿ ಸಹಾಯ ಮಾಡದೇ ಪೊಲೀಸರು ವಿಡಿಯೋ ಮಾಡುತ್ತಿದ್ದರು ಎಂಬ ಕಾರಣಕ್ಕೆ ಪೊಲೀಸರು ಟೀಕೆ ಎದುರಿಸುತ್ತಿದ್ದಾರೆ.

ಆದರೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಹುಡುಗಿಯ ಚಿಕ್ಕಪ್ಪ ತ್ರಿಲೋಕಿ ಮತ್ತು ಅನಿಲ್ ಮತ್ತು ಸಹೋದರ ಸೂರಜ್ ಸೇರಿದ್ದಾರೆ. ಪ್ರೇಮಿಗಳನ್ನು ಅಕ್ರಮವಾಗಿ ಕಟ್ಟಿಹಾಕಿ ಥಳಿಸಿ ದೈಹಿಕ ಹಿಂಸೆ ನೀಡಿದ ಆರೋಪ ಅವರ ಮೇಲಿದೆ. ಪೊಲೀಸರು ಅವರ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...