alex Certify ತೊಗರಿಯ ಗೊಡ್ಡುರೋಗದ ನಿರ್ವಹಣೆಗೆ ಇಲ್ಲಿದೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೊಗರಿಯ ಗೊಡ್ಡುರೋಗದ ನಿರ್ವಹಣೆಗೆ ಇಲ್ಲಿದೆ ಸಲಹೆ

ರಾಯಚೂರಿನ ಕೃಷಿ ಇಲಾಖೆ ವತಿಯಿಂದ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿಯಲ್ಲಿ ಗೊಡ್ಡುರೋಗದ ನಿರ್ವಹಣೆಗಾಗಿ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಜಯಪ್ರಕಾಶ್ ಅವರು ತಿಳಿಸಿದ್ದಾರೆ.

ಬಾಧೆಯ ಲಕ್ಷಣಗಳು: ಈ ರೋಗಕ್ಕೆ ತುತ್ತಾಗಿರುವ ಗಿಡದ ಎಲೆಗಳು ಹಸಿರು ಮತ್ತು ಹಳದಿ ಬಣ್ಣಕ್ಕೆ ತಿರುಗಿ ಮೊಸಾಯಿಕ್ ಲಕ್ಷಣಗಳು ಕಂಡುಬರುತ್ತವೆ. ಗಿಡದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಗಳು ಹೊಂದಿ ಈ ಗಿಡಗಳು ಹೂ ಮತ್ತು ಕಾಯಿಗಳಾಗದೇ ಹಸಿರಾಗಿದ್ದು, ಗಿಡಗಳು ಗೊಡ್ಡಾಗುತ್ತವೆ. ರೋಗದಿಂದಾಗಿ ಗಿಡದ ಕಾಂಡಗಳು ಬೆಳೆಯದೇ ಸಣ್ಣ ಟೊಂಗೆಗಳಾಗಿ, ಎಲೆಗಳ ಬೆಳೆವಣಿಗೆ ಕುಂಠಿತವಾಗಿ ಎಲೆಗಳು ಮುಟುರಿಕೊಳ್ಳುತ್ತವೆ.

ನಿರ್ವಹಣೆ: ಬಾಧಿತ ಗಿಡಗಳನ್ನು ಕಿತ್ತು ಒಂದು ಗೋಣಿ ಚೀಲದಲ್ಲಿ ಸಂಗ್ರಹಿಸಿ ಹೊಲದಿಂದ ಬೇರೆಡೆ ಒಯ್ದು ಭೂಮಿಯಲ್ಲಿ ಹುಗಿದುಬಿಡಿ. ನುತಿ ನಾಶಕ ಅಥವಾ ನೀರಿನಲ್ಲಿ ಕರಗುವ ಗಂಧಕ @3ಗ್ರಾಂ ಜೊತೆಗೆ ಸ್ಯಾಂಡೋವಿಟ್ @ 1ಮಿ.ಲೀ ಪ್ರತಿ ಲೀ ನೀರಿಗೆ ಸೇರಿಸಿ ಚೆನ್ನಾಗಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಆಯಾ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...