alex Certify ಬಸ್ ಗಾಗಿ ಕಾಯುತ್ತಿದ್ದ ಪಿಯು ವಿದ್ಯಾರ್ಥಿನಿ ಕಿಡ್ನ್ಯಾಪ್; ಮುಂದೇನಾಯ್ತು? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಗಾಗಿ ಕಾಯುತ್ತಿದ್ದ ಪಿಯು ವಿದ್ಯಾರ್ಥಿನಿ ಕಿಡ್ನ್ಯಾಪ್; ಮುಂದೇನಾಯ್ತು?

ತುಮಕೂರು: ಬಸ್ ಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯೋರ್ವಳನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಬೆಂಗಳೂರಿನ ಜಲಹಳ್ಳಿಕ್ರಾಸ್ ಬಳಿ ನಡೆದಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಆರು ದುರುಳರು ಅಪಹರಿಸಿದ್ದಾರೆ ಎಂಬ ಆರ್ಪ ಕೇಳಿಬಂದಿದೆ. ಜುಲೈ 8ರಂದು ನಡೆದಿರುವ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜಾಲಹಳ್ಳಿ ಕ್ರಾಸ್ ಬಳಿ ಯುವತಿ ತುಮಕೂರಿಗೆ ಹೋಗಲೆಂದು ಬಸ್ ಗಾಗಿ ಕಾಯುತ್ತಿದ್ದಳು, ಈ ವೇಳೆ ಯುವತಿಯ ಬಳಿ ಬಂದ ಇಬ್ಬರು ಯುವತಿಯರು ಏಕಾಏಕಿ ಯುವತಿಗೆ ರಾಸಾಯನಿಕ ಸಿಂಪಡಿಸಿದ್ದಾರೆ ಮಾಸ್ಕ್ ಹಾಕಿ ಪ್ರಜ್ಞೆ ತಪ್ಪಿಸಿ ಎಳೆದೊಯ್ದಿದ್ದಾರೆ. ಯುವತಿಯರ ಜೊತೆ ಇಬ್ಬರು ಯುವಕರು ಇದ್ದರು ಎನ್ನಲಾಗಿದೆ.

ಯುವತಿಯನ್ನು ಕಾರಿನಲ್ಲಿ ಕರೆದೊಯ್ದಿದ್ದರು. ಯುವತಿಗೆ ಪ್ರಜ್ಞೆ ಬಂದಾಗ ಕಾರನ್ನು ಮೈಸೂರು ಬಳಿ ನಿಲ್ಲಿಸಿ ಅಪಹರಣಕಾರರು ಟೀ ಕುಡಿಯಲು ಹೋಗಿದ್ದರು. ಈ ವೇಳೆ ಕಾರಿನಿಂದ ಇಳಿದ ವಿದ್ಯಾರ್ಥಿನಿ ತಪಿಸಿಕೊಂಡು ಬಂದಿದ್ದಾಳೆ. ಬಳಿಕ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ತೆರಳಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಯುವತಿ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಯುವತಿಯರು ಹಾಗೂ ನಾಲ್ವರು ಯುವಕರು ಕಾರಿನಲ್ಲಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣವನ್ನು ಮೈಸೂರು ಪೊಲೀಸರು ಪೀಣ್ಯ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...