7 ವರ್ಷದ ಮುನಿಸು: ಜೂಹಿ ಜೊತೆಗಿನ ಜಗಳ ಮುಗಿಸಲು ಅಮಿರ್ ಖಾನ್‌ಗೆ ರೀನಾ ದತ್ತಾ ಮನವಿ !

ಬಾಲಿವುಡ್ ನಟ ಅಮಿರ್ ಖಾನ್ ಅವರು ನಟಿ ಜೂಹಿ ಚಾವ್ಲಾ ಜೊತೆಗಿನ ತಮ್ಮ ಏಳು ವರ್ಷಗಳ ಸುದೀರ್ಘ ಜಗಳದ ಬಗ್ಗೆ ಇದೀಗ ಮೌನ ಮುರಿದಿದ್ದಾರೆ. ಈ ಜಗಳವನ್ನು ಕೊನೆಗೊಳಿಸಲು ತಮ್ಮ ಮಾಜಿ ಪತ್ನಿ ರೀನಾ ದತ್ತಾ ಹೇಗೆ ಒತ್ತಾಯಿಸಿದರು ಎಂಬುದನ್ನು ಅವರು ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಮಿರ್ ಖಾನ್ ತಮ್ಮ ಕೆಲವು ‘ಕೆಂಪು ಧ್ವಜ’ ಸ್ವಭಾವಗಳ ಬಗ್ಗೆ ಮಾತನಾಡುತ್ತಾ, ಜಗಳದ ನಂತರ ಯಾರಾದರೂ ತಮಗೆ ನೋವುಂಟುಮಾಡಿದರೆ, ಅವರು ಸಂಪೂರ್ಣವಾಗಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ.

ಅಮಿರ್-ಜೂಹಿ 7 ವರ್ಷದ ಜಗಳದ ನೆನಪು

ಒಮ್ಮೆ ತಮ್ಮ ಮಾಜಿ ಪತ್ನಿ, ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರೊಂದಿಗೆ ಜಗಳವಾಡಿದ ನಂತರ, ನಾಲ್ಕು ದಿನಗಳ ಕಾಲ ಅವರೊಂದಿಗೆ ಮಾತನಾಡಿರಲಿಲ್ಲ. ಇದು ಕಿರಣ್ ರಾವ್ ಅವರನ್ನು ಅಳುವಂತೆ ಮಾಡಿತ್ತು ಎಂದು ಅಮಿರ್ ನೆನಪಿಸಿಕೊಂಡರು. ಇದೇ ರೀತಿಯ ಪರಿಸ್ಥಿತಿ ತನಗೂ ಮತ್ತು ಜೂಹಿಗೂ ಇತ್ತು ಎಂದು ಆಮಿರ್ ಹಂಚಿಕೊಂಡಿದ್ದಾರೆ. “ಇದು ನನ್ನ ದೊಡ್ಡ ದೋಷಗಳಲ್ಲಿ ಒಂದಾಗಿತ್ತು. ನಾನು ಎಷ್ಟರಮಟ್ಟಿಗೆ ನೋವುಗೊಳ್ಳುತ್ತಿದ್ದೆ ಎಂದರೆ, ನಾನು ಯಾರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆನೋ ಅವರನ್ನು ಕ್ಷಮಿಸಲು ಕೂಡ ಸಿದ್ಧನಿರಲಿಲ್ಲ. ಜೂಹಿ ಮತ್ತು ನನ್ನ ನಡುವೆ ಜಗಳವಾಗಿ, ಅದು 7 ವರ್ಷಗಳ ಕಾಲ ಮುಂದುವರೆಯಿತು” ಎಂದು ಆಮಿರ್ ಹೇಳಿದ್ದಾರೆ.

ರೀನಾ ದತ್ತಾ ಜೂಹಿ ಜೊತೆ ಸಂಧಾನಕ್ಕೆ ಒತ್ತಾಯಿಸಿದ್ದು

“ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದರೂ, ನಾನು 7 ವರ್ಷಗಳ ಕಾಲ ಜೂಹಿ ಜೊತೆ ಮಾತನಾಡಿರಲಿಲ್ಲ. ಒಂದು ಸಣ್ಣ ವಿಷಯಕ್ಕೆ ಅವಳ ಮೇಲೆ ನನಗೆ ಬೇಸರವಾಗಿತ್ತು. ಜೂಹಿ ಸಾಕಷ್ಟು ಪ್ರಯತ್ನ ಪಟ್ಟರು. ನಾನು ಮಾತ್ರ ಕದಲಲಿಲ್ಲ. ರೀನಾ ನನಗೆ, ‘ನೀವು ಹೇಗೆ ಹೀಗೆ ವರ್ತಿಸುತ್ತಿದ್ದೀರಿ? ಅವಳನ್ನು ಭೇಟಿಯಾಗಿ, ಜಗಳವನ್ನು ಮುಗಿಸಿ’ ಎಂದು ಹೇಳುತ್ತಿದ್ದಳು. (ತಲೆ ಅಲ್ಲಾಡಿಸುತ್ತಾ) ನಾನು ತುಂಬಾನೇ ‘ಜಿಡ್ಡಿ’ (ಹಟಮಾರಿ) ಆಗಿದ್ದೆ” ಎಂದು ಆಮಿರ್ ವಿವರಿಸಿದ್ದಾರೆ.

ಅಮಿರ್ ಮತ್ತು ಜೂಹಿ ಯಾವಾಗ ಜಗಳವಾಡಿದ್ದು, ಏನಾಯ್ತು?

ಕೆಲವು ವರ್ಷಗಳ ಹಿಂದೆ, ‘ರೂಬರೂ ರೋಶ್ನಿ’ ಸಾಕ್ಷ್ಯಚಿತ್ರದ ಮಾಧ್ಯಮ ಸಂವಾದದ ವೇಳೆ, ಅಮಿರ್ ‘ಇಷ್ಕ್’ (1997) ಚಿತ್ರದ ಚಿತ್ರೀಕರಣದ ಸಮಯದಲ್ಲಿ ಜೂಹಿ ಜೊತೆಗಿನ ಜಗಳದ ಬಗ್ಗೆ ಮಾತನಾಡಿದ್ದರು. 2002 ರಲ್ಲಿ ರೀನಾ ಜೊತೆಗಿನ ತಮ್ಮ ವಿಚ್ಛೇದನದ ನಂತರ ಜೂಹಿ ಜೊತೆಗಿನ ಸಮಸ್ಯೆಗಳು ಬಗೆಹರಿದವು ಎಂದು ಆಮಿರ್ ಹೇಳಿದ್ದರು.

“ನನ್ನ ವಿಚ್ಛೇದನದ ಬಗ್ಗೆ ತಿಳಿದಾಗ, ಜೂಹಿ ನನಗೆ ಕರೆ ಮಾಡಿ ಭೇಟಿಯಾಗಲು ಕೇಳಿದಳು. ಜೂಹಿ ರೀನಾ ಮತ್ತು ನನಗೂ ಹತ್ತಿರವಾಗಿದ್ದಳು, ಮತ್ತು ನಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಅವಳು ಬಯಸಿದ್ದಳು. ನಾನು ಅವಳ ಕರೆ ಸ್ವೀಕರಿಸದಿರಬಹುದು ಎಂದು ಜೂಹಿಗೆ ತಿಳಿದಿದ್ದರೂ, ಅವಳು ನನಗೆ ಕರೆ ಮಾಡಿದಳು. ಅದು ನನ್ನ ಮನಸ್ಸನ್ನು ತಟ್ಟಿತು ಮತ್ತು ನಮ್ಮ ನಡುವಿನ ಸ್ನೇಹಕ್ಕೆ ಕಿಂಚಿತ್ತೂ ಧಕ್ಕೆಯಾಗಿಲ್ಲ ಎಂದು ನನಗೆ ಅರಿವಾಯಿತು. ನಾವು ಮಾತನಾಡುವ ಸಂಬಂಧದಲ್ಲಿ ಇರದಿದ್ದರೂ, ಪರಸ್ಪರ ಕಾಳಜಿ ವಹಿಸಿದ್ದೆವು” ಎಂದು ಆಮಿರ್ ನೆನಪಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read