BIG NEWS: ಬೀಚ್ ನೋಡಲೆಂದು ಬಂದಿದ್ದ ವೇಳೆ ದುರಂತ: ಮೂವರು ಪ್ರವಾಸಿಗರು ಸಮುದ್ರಪಾಲು

ಮಂಗಳೂರು: ಬೀಚ್ ನೋಡಲೆಂದು ಬಂದಿದ್ದ ಮೂವರು ಪ್ರವಾಸಿಗರು ಸಮುದ್ರ ಪಾಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುಳಾಯಿ ಬಳಿಯ ಹೊಸಬೆಟ್ಟು ಬಳಿ ನಡೆದಿದೆ.

ಚಿತ್ರದುರ್ಗದ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್, ಬೆಂಗಳೂರಿನ ಸತ್ಯವೇಲು ಮೃತ ದುರ್ದೈವಿಗಳು.

ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ಬೀಚ್ ನೋಡಲೆಂದು ಹೋಗಿದ್ದರು. ಈ ವೇಳೆ ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಅಲೆಗಳ ಹೊಡೆತಕ್ಕ ಸಿಲುಕಿದ್ದ ನಾಲ್ವರಲ್ಲಿ ಬೀದರ್ ಮೂಲದ ಪರಮೇಶ್ವರ್ ಎಂಬಾತನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಮೂವರು ನೀರುಪಾಲಾಗಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read