ರಾಜೀವ್ ಗಾಂಧಿ ಹತ್ಯೆ ಪ್ರಕರಣದ 3 ಅಪರಾಧಿಗಳು ಶ್ರೀಲಂಕಾಕ್ಕೆ ಗಡಿಪಾರು

ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾದ ಮುರುಗನ್, ರಾಬರ್ಟ್ ಮತ್ತು ಜಯಕುಮಾರ್ ಅವರನ್ನು ಶ್ರೀಲಂಕಾಕ್ಕೆ ಗಡಿಪಾರು ಮಾಡಲಾಗಿದೆ.

ಬುಧವಾರ ಬೆಳಗ್ಗೆ ತಮ್ಮ ಪಾಸ್‌ಪೋರ್ಟ್ ಪಡೆದು ಶ್ರೀಲಂಕಾ ಸರ್ಕಾರದಿಂದ ಹಸಿರು ನಿಶಾನೆ ತೋರಿದ ನಂತರ ಅವರನ್ನು ಚೆನ್ನೈ ವಿಮಾನ ನಿಲ್ದಾಣದಿಂದ ಶ್ರೀಲಂಕಾಕ್ಕೆ ಗಡೀಪಾರು ಮಾಡಲಾಯಿತು.

ಮುರುಗನ್, ಜಯಕುಮಾರ್ ಮತ್ತು ರಾಬರ್ಟ್ ಅವರು ತಿರುಚ್ಚಿ ನಿರಾಶ್ರಿತರ ಶಿಬಿರದಲ್ಲಿ ತಂಗಿದ್ದು, ಅವರನ್ನು ತಿರುಚ್ಚಿ ಪೊಲೀಸರು ಚೆನ್ನೈ ವಿಮಾನ ನಿಲ್ದಾಣಕ್ಕೆ ಕರೆದೊಯ್ದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಯೂ ಆಗಿರುವ ಮುರುಗನ್ ಅವರ ಪತ್ನಿ ನಳಿನಿ ಅವರು ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮುರುಗನ್ ಅವರನ್ನು ಕಳುಹಿಸಲು ಬಂದಿದ್ದರು.

ಮಾರ್ಚ್‌ ನಲ್ಲಿ, ನಳಿನಿ ತನ್ನ ಪತಿ ಮುರುಗನ್‌ಗೆ ಯುನೈಟೆಡ್ ಕಿಂಗ್‌ಡಮ್‌ಗೆ ಪ್ರಯಾಣಿಸಲು ಮತ್ತು ಅಲ್ಲಿ ತನ್ನ ಮಗಳೊಂದಿಗೆ ನೆಲೆಸಲು ಪಾಸ್‌ಪೋರ್ಟ್ ಪಡೆಯಲು ಸಂದರ್ಶನಕ್ಕೆ ಅನುಮತಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಸಲ್ಲಿಸಿರುವ ಅರ್ಜಿಯಲ್ಲಿ ನಳಿನಿ ಅವರು ಸುಪ್ರೀಂ ಕೋರ್ಟ್ ಎಲ್ಲಾ ಏಳು ಜನರನ್ನು ಬಿಡುಗಡೆಗೊಳಿಸಿದರೆ, ತನ್ನ ಪತಿ ಮುರುಗನ್ ಶ್ರೀಲಂಕಾದ ಪ್ರಜೆಯಾಗಿರುವ ಕಾರಣ ತಿರುಚ್ಚಿ ಜಿಲ್ಲೆಯ(ತಮಿಳುನಾಡು) ವಿಶೇಷ ಶಿಬಿರದಲ್ಲಿ ಇರಿಸಲಾಗಿದೆ ಎಂದು ಉಲ್ಲೇಖಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read