ವನ್ಯಜೀವಿಗಳ-ಸ್ವರ್ಗ ಬಂಧ್ವಾಗಢ್

ಮಧ್ಯಪ್ರದೇಶದ ದೊಡ್ಡಪಟ್ಟಣ ಉಮರಿಯಾ. ಮಧ್ಯಪ್ರದೇಶದ ಸೆನ್ ನದಿ ಮತ್ತು ಜೋಹಿಲಾ ನದಿ ಪೂರ್ವ ದಿಕ್ಕಿನ ಕಡೆಗೆ ಹರಿದರೆ, ಬಂಧ್ವಾಗಢ್ ಮತ್ತು ಉಮರ್ ನದಿ ಪಶ್ಚಿಮ ಪ್ರದೇಶದಲ್ಲಿ ಹರಿಯುತ್ತದೆ. ಹಲವಾರು ಕಾಡುಪ್ರಾಣಿಗಳಿಗೆ ಸ್ವಾಭಾವಿಕ ಆವಾಸಸ್ಥಾನ ಕೂಡ ಹೌದು.ರಾಯಲ್ ಹುಲಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ಬೇಟೆಗಾರರಿಂದ ಹಾಳಾಗದೆ ಇನ್ನೂ ಹಾಗೆ ಸಹಜ ಸೌಂದರ್ಯವನ್ನು ಉಳಿಸಿಕೊಂಡಿರುವ ವನ್ಯಧಾಮವಾಗಿದ್ದು, ವನ್ಯಜೀವಿಗಳ ಸ್ವರ್ಗವೆನಿಸಿದೆ. ಇಲ್ಲಿ ಎಲೆ ಉದುರುವ ಕಾಡುಗಳು ಹೆಚ್ಚಾಗಿ ಕಂಡುಬರುತ್ತವೆ. ದಟ್ಟ ಹಸಿರು ಕಾಡುಗಳು ಹಾಗೂ ಹುಲ್ಲುಗಾವಲುಗಳು ಹಲವಾರು ಪಕ್ಷಿಗಳಿಗೆ, ದೊಡ್ಡ ಸಸ್ಯಾಹಾರಿ ಪ್ರಾಣಿಗಳಿಗೆ, ವಿವಿಧ ಜಾತಿಯ ಕೀಟಗಳಿಗೆ ಆಹಾರ ಒದಗಿಸುತ್ತಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಮ್ಮೋಹನಗೊಳಿಸುವಂತಹ ನೈಸರ್ಗಿಕ ಸೌಂದರ್ಯವೇ ಈ ಪ್ರದೇಶವನ್ನು ಮಧ್ಯಪ್ರದೇಶದ ಪ್ರಮುಖ ಪ್ರವಾಸಿ ತಾಣವನ್ನಾಗಿಸಿದೆ. ಇಲ್ಲಿ ಹಿತವಾಗಿ ತಂಗಾಳಿ ಬೀಸುತ್ತಿರುತ್ತದೆ ಮತ್ತು ಶಾಂತ ವಾತಾವರಣ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪರಿಸರಸ್ನೇಹಿ ಪ್ರವಾಸ ಕೈಗೊಳ್ಳಲು ಇಚ್ಚಿಸುವವರಿಗೆ ಇದು ಸೂಕ್ತ ತಾಣ. ಬಂಧ್ವಾಗಢ್ ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನ. ಸುತ್ತಲೂ ದಟ್ಟ ಕಾನನವಿದ್ದು, ಮಹಾರಾಜರ ಕಾಲದಲ್ಲಿ ಇದೊಂದು ಬೇಟೆಯ ತಾಣವಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಂಧ್ವಾಗಢ್ ಆಧುನೀಕರಣಗೊಂಡಿದೆ. ಇಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಹೊಸ ರೆಸಾರ್ಟ್ ಗಳು ನಿರ್ಮಾಣಗೊಂಡಿದೆ.

ಬಂಧ್ವಾಗಢ್ ಫೋರ್ಟ್

ಈ ಕೋಟೆ ಯಾವ ಕಾಲದಲ್ಲಿ ನಿರ್ಮಾಣವಾಯಿತು ಅನ್ನುವುದರ ಬಗ್ಗೆ ಮಾಹಿತಿ ಇಲ್ಲ. ಆದರೂ 2000 ವರ್ಷಗಳ ಇತಿಹಾಸ ಹೊಂದಿರಬಹುದು ಎಂದು ನಂಬಲಾಗಿದೆ. ಶ್ರೀರಾಮ ರಾವಣನನ್ನು ಸೋಲಿಸಿದ ನಂತರ ಇದನ್ನು ನಿರ್ಮಿಸಿ, ತಮ್ಮ ಲಕ್ಷ್ಮಣನಿಗೆ ಕೋಟೆಯಿಂದಲೇ ಲಂಕಾವನ್ನು ನೋಡಿಕೊಳ್ಳುವಂತೆ ಹೇಳಿದ ಎಂದು ಪುರಾಣದ ಕಥೆಯೊಂದು ಹೇಳುತ್ತದೆ. ಆ ಕಾರಣಕ್ಕಾಗಿಯೇ ಈ ಕೋಟೆಗೆ ಬ್ರದರ್ಸ್ ಫೋರ್ಟ್ ಎಂಬ ಹೆಸರು ಬಂದಿದೆ.

ಬಂಧ್ವಾಗಢ್ ಹಿಲ್

ಬಂಧ್ವಾಗಢ್ ಕೋಟೆಯ ಹತ್ತಿರದಲ್ಲಿದ್ದು, ಇದು ಸಮುದ್ರ ಮಟ್ಟದಿಂದ 807 ಮೀಟರ್ ಎತ್ತರದಲ್ಲಿದೆ. ಬೆಟ್ಟದ ಸುತ್ತಲೂ ಇಳಿಜಾರಾದ ಕಣಿವೆಗಳಿವೆ. ಜೌಗು ಹುಲ್ಲುಗಾವಲುಗಳಿದ್ದು, ಇದನ್ನು ಸ್ಥಳೀಯವಾಗಿ ಬೋಹೆರಾ ಎಂದು ಕರೆಯುತ್ತಾರೆ. ಸಣ್ಣ ಬೆಟ್ಟದ ಸುತ್ತಲೂ 32 ಸಣ್ಣ ಸಣ್ಣ ದಿಣ್ಣೆಗಳಿವೆ. ಇವುಗಳು ಹಲವು ಕಣಿವೆಗಳನ್ನು ರೂಪಿಸಿವೆ.

ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನ

ಬಂಧ್ವಾಗಢ್ ಪ್ರಮುಖ ಆಕರ್ಷಣೆ ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನ. 450 ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿ ಪ್ರದೇಶ ಹೊಂದಿದ್ದು, ಫ್ಲೋರಾ ಮತ್ತು ಫೌನಾ ಜಾತಿಗೆ ಸೇರಿದ ಸಸ್ಯ ವರ್ಗವನ್ನು ಇಲ್ಲಿ ಕಾಣಬಹುದು. ಈ ಉದ್ಯಾನ, ಬೆಟ್ಟ ಪ್ರದೇಶಗಳನ್ನು ಒಳಗೊಂಡಿದೆ. ಮರಳುಗಲ್ಲು, ಬಂಡೆಕಲ್ಲು, ಜೌಗು ಭೂಮಿ, ದಟ್ಟ ಅರಣ್ಯ, ಹುಲ್ಲುಗಾವಲುಗಳಿಂದ ಆವೃತವಾಗಿದೆ. ಬಂಧ್ವಾಗಢ್ ವನ್ಯಜೀವಿಗಳ ಅಭಯಾರಣ್ಯದಲ್ಲಿ ಎಲಿಫೆಂಟ್ ಸಫಾರಿ ಕೈಗೊಳ್ಳುವುದು ಇಲ್ಲಿನ ಮತ್ತೊಂದು ಆಕರ್ಷಣೆ. ಸಫಾರಿ ಮಾಡುವುದರ ಮೂಲಕ ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ಆಸ್ವಾದಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read