ಮಳೆ ಅವಾಂತರಕ್ಕೆ ಸೋರುತ್ತಿದೆ ತಹಶೀಲ್ದಾರ್ ಕಚೇರಿ; ಬಕೆಟ್ ನಲ್ಲಿ ನೀರು ಹೊರ ಹಾಕಿದ ಸಿಬ್ಬಂದಿ

ಹಾವೇರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ತಹಶೀಲ್ದಾರ್ ಕಚೇರಿಯೇ ಸೋರುತ್ತಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆ ಅವಾಂತರಕ್ಕೆ ತಹಶೀಲ್ದಾರ್ ಕಚೇರಿ ಸೋರುತ್ತಿದೆ. ಕಚೇರಿಯಲ್ಲಿ ಟಾರ್ಪಲ್ ಕಟ್ಟಿ ಸಿಬ್ಬಂದಿಗಳು ದಾಖಲೆ ರಕ್ಷಣೆ ಮಾಡುತ್ತಿದ್ದಾರೆ. ಇನ್ನೊಂದೆಡೆ ತಹಶೀಲ್ದಾರ್ ಕಚೇರಿ ಒಳಗೆ ಬಕೆಟ್ ಇಟ್ಟು, ನೀರು ಹೊರಹಾಕಲಾಗುತ್ತಿದೆ.

ಮಳೆ ನೀರಿನಿಂದ ಕಚೇರಿಯಲ್ಲಿನ ಹಳೆ ದಾಖಲೆಗಳು ಹಾಳಾಗುತ್ತಿದ್ದು, ದಾಖಲೆಗಳ ರಕ್ಷಣೆಗೆ ಸಿಬ್ಬಂದಿ ಪರದಾಡಿದ್ದಾರೆ. ವಿಷಯ ತಿಳಿದು ಜಿಲ್ಲಾಧಿಕಾರಿ ರಘುನಂದ ಮೂರ್ತಿ, ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸಧ್ಯಕ್ಕೆ ಕಚೇರಿ ಮೇಲೆ ತಗಡಿನ ಶೀಟ್ ಹಾಕುವಂತೆ ಸೂಚನೆ ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read